ಸುಳ್ಯದ‌ ಸ್ನೇಹ ವಿದ್ಯಾಸಂಸ್ಥೆಯಲ್ಲಿ ವಿದ್ಯಾನಿಧಿ ವಿತರಣೆ

0

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೋಟೆ ಫೌಂಡೇಷನ್ ನ ರೈಟ್ ಟು ಲಿವ್ ಪ್ರತಿಷ್ಠಾನವು ನಡೆ ಸುತ್ತಿರುವ ಉಚಿತ ಕಂಪ್ಯೂಟರ್ ತರಬೇತಿಯ ,ಸ್ಫೂರ್ತಿ ಕೇಂದ್ರದಲ್ಲಿ ಸೆ.15ರಂದು ವಿದ್ಯಾನಿಧಿ ನಗದು ಪುರಸ್ಕಾರದ ವಿತರಣೆ ನಡೆಯಿತು.

ಸುಳ್ಯ ತಾಲೂಕಿನ ಐದು ಸರಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹದಿನೈದು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೋಟೆ ಪ್ರತಿಷ್ಠಾನದ ಅಧ್ಯಕ್ಷ ರಘುರಾಮ ಕೋಟೆಯವರ ಅಮ್ಮ ಶ್ರೀಮತಿ ಪಾರ್ವತಿ ಕೋಟೆಯವರು ಮತ್ತು ಅಕ್ಕ ಶಶಿಕಲಾ ಕೋಟೆಯವರು ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಕೋಟೆಯವರ ಅಳಿಯ ಗಣಪಯ್ಯರು ವಹಿಸಿದ್ದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರೈಟ್ ಟು ಲಿವ್ ಪರವಾಗಿ ಪ್ರದೀಪ್ ರವರು ಸ್ವಾಗತಿಸಿದರು. ಕೊನೆಯಲ್ಲಿ ಹಿರಿಯ ವಿದ್ಯಾರ್ಥಿನಿ ಹರ್ಷಿತಾ ಧನ್ಯವಾದ ಸಮರ್ಪಿಸಿದ ಈ ಕಾರ್ಯಕ್ರಮವನ್ನು ಶ್ರೀಮತಿ ಶೈಲಶ್ರಿ
ವೆಂಕಟ್ ರಾಜ್ ನಿರೂಪಿಸಿದರು.