ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶೋತ್ಸವ

0


ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸ.೧೯ರಂದು ಸಾಮೂಹಿಕ ಗಣಪತಿ ಹೋಮ, ಧಾನ್ಯಲಕ್ಷ್ಮಿ ಪೂಜೆ, ಕದಿರು ಕಟ್ಟುವುದು, ಕದಿರು ಪ್ರಸಾದ ವಿತರಣೆ, ಮಹಾಪೂಜೆ ನಂತರ ಪ್ರಸಾದ ವಿತರಣೆ, ಮಕ್ಕಳಿಗೆ ಅನ್ನ ಪ್ರಾಸನ, ಸಾರ್ವಜನಿಕ ನವಾನ್ನ ಸಂತರ್ಪಣಾ ಕಾರ್ಯಕ್ರಮವು ನಡೆಯಿತು.


ಈ ಸಂದರ್ಭದಲ್ಲಿ ದೇವಾಲಯದ ಅಧ್ಯಕ್ಷರಾದ ಪಿ. ಡಿ. ವಿಶ್ವನಾಥ, ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಅರ್ಚಕರಾದ ಲಕ್ಷ್ಮೀಶ್ ಭಟ್, ಕಾರ್ಯದರ್ಶಿ ಕೆ. ಕೆ. ಶ್ರೀಧರ, ಮಾಜಿ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕದಿರು ಪ್ರಸಾದಕ್ಕೆ ದೂರದ ಊರಿನಿಂದ ಭಕ್ತಾಭಿಮಾನಿಗಳು ದೇವಾಲಯಕ್ಕೆ ಆಗಮಿಸಿದ್ದರು.