ಹೆಡ್ ಕಾನ್ಸ್‌ಟೇಬಲ್ ಬಾಲಕೃಷ್ಣ ಗೌಡ ಕೊಯಿಕುಳಿ ಶ್ರದ್ದಾಂಜಲಿ ಕಾರ್ಯಕ್ರಮ

0

ದುಗ್ಗಲಡ್ಕ ಸಮೀಪದ ಕುಂಬೆತ್ತಿಬನ ನಿವಾಸಿ, ಸುಳ್ಯ ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಬಾಲಕೃಷ್ಣ ಗೌಡ ಕೊಯಿಕುಳಿ ಸೆ.9ರಂದು ನಿಧನರಾಗಿದ್ದು ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಂದು ಅವರ ಮನೆಯಲ್ಲಿ ನಡೆಯಿತು.

ನಿವೃತ್ತ ಸಹಕಾರಿ ಅಧಿಕಾರಿ ರತ್ನಾಕರ ಗೌಡ ಬಳ್ಳಡ್ಕ ಮತ್ತು ಕೆ.ಟಿ.ವಿಶ್ವನಾಥ ಕೊಯಿಕುಳಿ ನುಡಿನಮನ ಸಲ್ಲಿಸಿದರು.ಮೃತರ ಪತ್ನಿ ಮೀನಾಕ್ಷಿ, ಪುತ್ರರಾದ ಹೇಮಂತ್,

ಜಯಂತ್, ಸಹೋದರ ಬಾಲಚಂದ್ರ, ಕುಟುಂಬಸ್ಥರು, ಬಂಧುಗಳು, ಊರವರು, ಇಲಾಖೆಯ ಸಹೋದ್ಯೋಗಿಗಳು ಉಪಸ್ಥಿತರಿದ್ದರು.