ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ-ರಜತ‌ ಸಂಭ್ರಮ

0


🔸ವೈಭವದ ಶೋಭಾಯಾತ್ರೆ

ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ -ರಜತ ಸಂಭ್ರಮದ ಅಂಗವಾಗಿ ಸೆ.21 ರಂದು ಸಂಜೆ ವೈಭವದ ಶೋಭಾಯಾತ್ರೆ ಆರಂಭ ಗೊಂಡಿದ್ದು ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ನಡೆಯಲಿದೆ.


ಸಂಜೆ ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದು ಪಂಜ ಹೊಳೆಯ ನಾಗತೀರ್ಥ ಸಂಗಮದಲ್ಲಿ ಜಲಸ್ತಂಭನ ಜರುಗಲಿದೆ.

ಶೋಭಾಯಾತ್ರೆಯಲ್ಲಿ
ಹುಲಿ ವೇಷ, ಕೀಲು ಕುದುರೆ , ಭಜನೆ, ನಾಸಿಕ್ ಬ್ಯಾಂಡ್,ಕುಣಿತ ಭಜನೆ ಮೊದಲಾದ ತಂಡಗಳು ಪಾಲ್ಗೊಂಡು ಮೆರುಗು ನೀಡಿತ್ತು. ಉತ್ಸವ ಸಮಿತಿಯವರು, ಆರಾಧನಾ ಸಮಿತಿಯವರು, ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.