ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಕನ್ಯಾ ಸಂಕ್ರಮಣ ಪೂಜೆ, ಶಾಸಕಿ ಬಾಗೀರಥಿ ಮುರುಳ್ಯರಿಗೆ ಸನ್ಮಾನ

0

ಅಡ್ಪಂಗಾಯ ಶ್ರೀ ಅಯ್ಯಪ್ಪ ಮಂದಿರದಲ್ಲಿ ಕ್ಷೇತ್ರದ ಧರ್ಮದರ್ಶಿ ಶಿವಪ್ರಕಾಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಕನ್ಯಾ ಸಂಕ್ರಮಣ ಪೂಜೆ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೆ. 20 ರಂದು ರಾತ್ರಿ ನಡೆಯಿತು.


ಪ್ರಾತಃ ಕಾಲ ಗಣಪತಿ ಹವನದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಾಯಂಕಾಲ ದೀಪರಾಧನೆ ಬಳಿಕ ಶ್ರೀ ಕೃಷ್ಣ ಭಜನಾ ಮಂಡಳಿ ಮೇನಾಲ-ಅಜ್ಜಾವರ
ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಮತ್ತು ಶ್ರೀ ಜಗದೀಶ್ ಕೆ. ಆರ್. ನಗರ, ಮಂಡ್ಯ, ತಿಮ್ಮಯ್ಯ ಹಾಗೂ ಮನೆಯವರು ಮಡಿಕೇರಿ, ಸುಭಾಶ್ಚಂದ್ರ ಸೊರೊಂಜ ಇವರ ಹರಕೆ ಸೇವಾ ರೂಪದಲ್ಲಿ ದುರ್ಗಾಪೂಜೆ ನಡೆಯಿತು ಬಳಿಕ‌ ಸಂಕ್ರಮಣ ಪೂಜೆ, ಪ್ರಸಾದ ವಿತರಣೆ ನಂತರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ, ನಿವೃತ್ತ ಯೋಧ ಸುಬಾಶ್ಚಂದ್ರ ಸೊರಂಜ ಹಾಗೂ ಉದಯೋನ್ಮುಖ ಕವಯತ್ರಿ ಶ್ರೀಮತಿ ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮುಂಡ ಇವರುಗಳನ್ನು ಶ್ರೀಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರವರು ಸನ್ಮಾನಪತ್ರ, ಫಲ-ಪುಷ್ಪಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.


ನಂತರ ಸುಭಾಶ್ಚಂದ್ರ ಸೊರಂಜ ಇವರ ಸೇವಾರೂಪದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.