ಆಂದ್ರಪ್ರದೇಶದಲ್ಲಿ ನಡೆದ ಚೌತಿ ಮೆರವಣಿಗೆಯಲ್ಲಿ ಭಾಗವಹಿಸಿದ ಬಾಳಿಲದ ಸಿಂಗಾರಿಮೇಳ

0

ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ಸದಸ್ಯರು ಕೆಲವು ವರ್ಷಗಳಿಂದ ಸಿಂಗಾರಿಮೇಳದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಪುರುಷರ ತಂಡ ಮಾತ್ರವಲ್ಲದೆ ಮಹಿಳಾ ತಂಡವೂ ತಮ್ಮ ಕೈಚಲಕದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದು, ಇದೀಗ ಹೊರರಾಜ್ಯ ಆಂದ್ರಪ್ರದೇಶದಲ್ಲೂ ಚೆಂಡೆ ಬಾರಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಸೆ. 20ರಂದು ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದ ವಿಜೃಂಭಣೆಯ ಗಣೇಶನ ಶೋಭಾಯಾತ್ರೆಯಲ್ಲಿ ತಂಡದ ಸುಮಾರು 17 ಮಂದಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಸಿಂಗಾರಿ ಮೇಳದ ಸದಸ್ಯರು ಭಾಗವಹಿಸಿದ್ದರು.