ಕೊಲ್ಲಮೊಗ್ರು: ಗ್ರಾಮ ಗೌಡ ಸಮಿತಿ ,ಮಹಿಳಾ ಘಟಕ ಮತ್ತು ತರುಣ ಘಟಕಗಳ ಸಭೆ

0

ಯುವಕನ ಚಿಕಿತ್ಸೆಗಾಗಿ ಮಿಡಿದ ಗೌಡ ಸಮುದಾಯ: ಧನ ಸಹಾಯ ಹಸ್ತಾಂತರ

ಕೊಲ್ಲಮೊಗ್ರು ಗ್ರಾಮ ಗೌಡ ಸಮಿತಿ ,ಮಹಿಳಾ ಘಟಕ ಮತ್ತು ತರುಣ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸೆ .25 ರಂದು ಸ್ವಜಾತಿ ಬಾಂಧವರ ಸಭೆ ನಡೆಯಿತು .

ಸಭಾಧ್ಯಕ್ಷತೆಯನ್ನು ಗುತ್ತಿಗಾರು ವಲಯ ಉಪಾಧ್ಯಕ್ಷರಾದ ವಸಂತ ಕಿರಿಭಾಗ ರವರು ವಹಿಸಿದ್ದರು .

ಕಿಡ್ನಿ ವೈಫಲ್ಯ ಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಚಿತ್ ಶಿವಾಲರಿಗೆ ಸಮುದಾಯ ಬಾಂಧವರಿಂದ ಸಂಗ್ರಹವಾದ ನಗದು ಹಣ ರೂ 1,39150 ನ್ನು ಮತ್ತು ಆನ್ಲೈನ್ ಮೂಲಕ ರೂ 27,000 ಒಟ್ಟು ಮೊತ್ತ 1,66150 ರೂ.ವನ್ನು ಸಚಿತ್ ಶಿವಾಲ ರವರ ತಂದೆ ಎಸ್ .ಆರ್. ಚಿನ್ನಪ್ಪ ಶಿವಾಲ ರವರಿಗೆ ದಾಖಲೆ ಪತ್ರದೊಂದಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಗೌಡ ಸಮಿತಿಗಳ‌ ಪಧಾದಿಕಾರಿಗಳು ಮತ್ತು ಗೌಡ ಬಾಂಧವರು ಗಳು ಉಪಸ್ಥಿತರಿದ್ದರು.