ಬೆಳ್ಳಾರೆಯಲ್ಲಿ ಹೋಟೆಲ್ ಸಾಯಿಸಾಗರ್ ಶುಭಾರಂಭ

0

ಬೆಳ್ಳಾರೆಯ ಮುಖ್ಯ ರಸ್ತೆ ದೇವಿ ಹೈಟ್ಸ್ ,ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಪ್ರಶಾಂತ್ ಪೂಂಜಾರವರ ಮಾಲಕತ್ವದ ಹೋಟೆಲ್ ಸಾಯಿಸಾಗರ್ ಸೆ.28 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.


ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಕಾಂಪ್ಲೆಕ್ಸ್ ಮಾಲಕ ನವೀನ ರೈ ತಂಬಿನಮಕ್ಕಿ,ರವೀಂದ್ರ ಪೂಂಜಾ,ಶ್ರೀಮತಿ ಮೀನಾಕ್ಷಿ, ರಮಿತಾ,ವಿದ್ಯಾಶ್ರೀ,ಶ್ರೀನಾಥ್ ರೈ ಬಾಳಿಲ,ಚಿನ್ಮಯ್, ಕರುಣಾಕರ ಆಳ್ವ,ಚಂದ್ರಶೇಖರ ಕಾಮತ್,ಪ್ರೀತಂ ರೈ,ಪ್ರಮೋದ್ ಕುಮಾರ್ ಶೆಟ್ಟಿ ಕುಂಟುಪುಣಿಗುತ್ತು,ವಿನಯ ಭಾರದ್ವಾಜ್,ವಸಂತ ನಡುಬೈಲು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಚಾ ತಿಂಡಿ, ಊಟ ಉಪಹಾರ, ಫಾಸ್ಟ್ ಫುಡ್,ಜ್ಯೂಸ್ ಐಸ್ ಕ್ರೀಂ, ಚಾಟ್ಸ್, ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.