ಸುಳ್ಯದಲ್ಲಿ ಗುರುವಂದನಾ ಕಾರ್ಯಕ್ರಮ : 60 ಮಂದಿ ಶಿಕ್ಷಕರಿಗೆ ಸನ್ಮಾನ

0

ಸುಳ್ಯ ಕ್ಷೇತ್ರದ ಶಾಸಕಿ‌ ಭಾಗೀರಥಿ ಮುರುಳ್ಯರ ಸಾರಥ್ಯದಲ್ಲಿ ಪ್ರಣವ ಫೌಂಡೇಶನ್ ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ‌ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಲಿಮಲೆ ಜ್ಞಾನದೀಪ ವಿಶ್ವಸ್ಥಮಂಡಳಿ ಅಧ್ಯಕ್ಷ ಚಂದ್ರಶೇಖರ ತಳೂರು ಶಿಕ್ಷಕರನ್ನು ಸನ್ಮಾನಿಸಿದರು.
ಪೆರಾಜೆ ಜ್ಯೋತಿ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯ ಅಭಿನಂದನಾ ಭಾಷಣ ಮಾಡಿದರು.

ಸುಳ್ಯ ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಜಾಲ್ಸೂರು ವಿವೇಕಾನಂದ ವಿದ್ಯಾಸಂಸ್ಥೆಯ ಸಂಚಾಲಕ ಸುಧಾಕರ‌ ಕಾಮತ್, ಜಿ.ಪಂ. ಮಾಜಿ ಸದಸ್ಯರುಗಳಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ,
ಪ್ರಣವ ಫೌಂಡೇಶನ್ ಗೌರವ ಸಲಹೆಗಾರ ಪ್ರಸಾದ್ ಜೋಶಿ, ಟ್ರಸ್ಟಿ ಅನುರಾಧ ಮಧುಗಿರಿ, ಸುಳ್ಯ ಸಿಡಿಪಿಒ ಶೈಲಜಾ ದಿನೇಶ್ ವೇದಿಕೆಯಲ್ಲಿದ್ದರು.

ಶ್ರೀಮತಿ ಮಮತಾ ಪ್ರಾರ್ಥಿಸಿದರು. ನಾಗರಾಜ್ ಹೆಬ್ಬಾಳ್ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಈ.ರಮೇಶ್ ಸ್ವಾಗತಿಸಿದರು. ಶಿಕ್ಷಕಿಯರಾದ ಮಮತಾ ಹಾಗೂ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.