ಪ್ರಾಂಶುಪಾಲ ಕುಂದಲ್ಪಾಡಿ ದಿವಾಕರ ರವರಿಗೆ ನೇಷನ್ ಬಿಲ್ಡರ್ ಅವಾರ್ಡ್

0


ಮಡಿಕೇರಿಯ ರೋಟರಿ ವುಡ್ಸ್ ವತಿಯಿಂದ ನೀಡಲಾಗುವ ನೇಷನ್ ಬಿಲ್ಡರ್ಸ್ ಪ್ರಶಸ್ತಿಗೆ ಶ್ರಿ ಕಾವೇರಿ ಪದವಿ ಪೂರ್ವ ಕಾಲೇಜು ಭಾಗಮಂಡಲದ ಪ್ರಾಂಶುಪಾಲ ಶ್ರೀ ಕುಂದಲ್ಪಾಡಿ ದಿವಾಕರ ರವರು ಭಾಜನರಾಗಿದ್ದಾರೆ.ಕಳೆದ 30ವರ್ಷಗಳಿಂದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿ 2021ರಿಂದ ಪ್ರಾಂಶುಪಾಲರಾಗಿ ಭಡ್ತಿ ಹೊಂದಿ ಸೇವೆ ಸಲ್ಲಿಸುತಿರುವ ದಿವಾಕರ ರವರು ಅರ್ಥಶಾಸ್ತ್ರ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಎನ್ ಸಿ ಇ ಆರ್ ಟಿ. ಪಠ್ಯಪುಸ್ತಕದ ಅನುವಾದ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.ಪದವಿ ಪೂರ್ವ ಶಿಕ್ಷಣದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಡಿಕೇರಿಯ ಹೊಸ ಬಡಾವಣೆಯಲ್ಲಿ ನೆಲೆಸಿರುವ ಶ್ರಿ ದಿವಾಕರ ರವರು ಪೆರಾಜೆ ಗ್ರಾಮದ ಕುಂದಲ್ಪಾಡಿ ದಿವಂಗತ ಜತಪ್ಪ ಮತ್ತು ಬೊಮ್ಮಕ್ಕ ದಂಪತಿಗಳ ಸುಪುತ್ರ.