ಕೊ.ಸಂಪಾಜೆ: ಪಯಸ್ವಿನಿ ಯುವಕ ಸಂಘದ ವಾರ್ಷಿಕ ಮಹಾಸಭೆ

0


ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷಚತೀರ್ಥಪ್ರಸಾದ್ ದುಗ್ಗಳ ವಹಿಸಿದ್ದರು. ಕಳೆದ ಸಭೆಯಲ್ಲಿ ನಡೆದ ಪಧಾಧಿಕಾರಿಗಳ ಆಯ್ಕೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಕಿರಣ್ ಬಾಲಂಬಿ, ಉಪಾಧ್ಯಕ್ಷರಾಗಿ ಅಕ್ಷಯ್ ಅಳಿಕೆ, ಕಾರ್ಯದರ್ಶಿಯಾಗಿ ಪ್ರಸನ್ನ ಕಾನೋವು, ಸಹ ಕಾರ್ಯದರ್ಶಿಯಾಗಿ ಹರೀಶ್ ಪಟ್ರಕೋಡಿ, ಖಜಾಂಜಿಯಾಗಿ ವರುಣ್ ಆಚಾರ್ಯ , ಕ್ರೀಡಾ ಕಾರ್ಯದರ್ಶಿಯಾಗಿ ಹೇಮಂತ್ ಕುಂಬಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯಶವಂತ ಅಳಿಕೆ ಇವರಿಗೆ ಹಿರಿಯ ಕಿರಿಯ ಸದಸ್ಯರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರ ಮಾಡಲಾಯಿತು.