ಆಲೆಟ್ಟಿ: ಚಂದ ಕುಡೆಕಲ್ಲು ರವರಿಗೆ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದಿಂದ ಸನ್ಮಾನ

0

ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಪೆರ್ಣೆ ಮುಚ್ಚಿಲೋಟ್ ಶ್ರೀ ಭಗವತಿ ಕ್ಷೇತ್ರದ ಕರಣಿಕ ಚಂದ ಕುಡೆಕಲ್ಲು ದಂಪತಿ ಯವರನ್ನು ಮನೆಯಲ್ಲಿ ಅ.4 ರಂದು ಸನ್ಮಾನಿಸಲಾಯಿತು.


ಸುಳ್ಯದಲ್ಲಿ ನಡೆದ ಗಾಣಿಗ ಸಮ್ಮಿಲನ ಕಾರ್ಯಕ್ರಮದಲ್ಲಿ ಅನಿವಾರ್ಯ ಕಾರಣದಿಂದ ಭಾಗವಹಿಸದಿರುವ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ತೆರಳಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ, ಕಾರ್ಯದರ್ಶಿ ಸುರೇಶ್ ಕರ್ಲಪ್ಪಾಡಿ,ಖಜಾಂಜಿ ಗೋಪಾಲಕೃಷ್ಣ ಮೊರಂಗಲ್ಲು,ಸಂಚಾಲಕ ಪ್ರವೀಣ್ ಜಯನಗರ, ಸುಬ್ಬ ಪಾಟಾಳಿ ಕಾಂತಮಂಗಲ,
ರಾಧಾಕೃಷ್ಣ ಬೇರ್ಪಡ್ಕ, ಕೇಶವ ಮೊರಂಗಲ್ಲು, ಮಿಥುನ್ ಕರ್ಲಪ್ಪಾಡಿ, ವೆಂಕಟ್ರಮಣ ಬೇರ್ಪಡ್ಕ ಮತ್ತು ಸಮಿತಿ ಸದಸ್ಯರು ಹಾಗೂ ಮನೆಯವರು ಉಪಸ್ಥಿತರಿದ್ದರು.