ದುಗ್ಗಲಡ್ಕದಲ್ಲಿ ನಗರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ

0

ಎರಡು ದಿನಗಳ ಕ್ರೀಡಾಕೂಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿ

ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಸುಳ್ಯ ನಗರ ವಲಯ ಮಟ್ಟದ 14-17ರ ವಯೋಮಾನದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ ಇಂದು ಉದ್ಘಾಟನೆಗೊಂಡಿತು.


ಎರಡು ದಿನ ನಡೆಯುವ ಕ್ರೀಡಾಕೂಟವನ್ನು ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಅರಂತೋಡು ನೆ.ಸ್ಮಾ.ಪದವಿ ಪೂರ್ವ ಕಾಲೇಜಿನ ನಿವೃತ್ತ ದೈ.ಶಿ.ಶಿಕ್ಷಕ ಎ.ಸಿ‌.ವಸಂತ,ಧ.ಗ್ರಾ.ಯೋಜನೆಯ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಯತೀಶ್ ರೈ ದುಗ್ಗಲಡ್ಕ, ನ.ಪಂ.ಮಾಜಿ ಅಧ್ಯಕ್ಷ ಶ್ರೀಮತಿ ಶೀಲಾವತಿ ಮಾಧವ, ಕೊಯಿಕುಳಿ ಹಿ‌.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಮಾಧವ ಮೂಕಮಲೆ ಅತಿಥಿಗಳಾಗಿ ಭಾಗವಹಿಸಿದ್ದರು.


ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕೆದ್ಕಾನ ಧ್ವಜಾರೋಹಣ ನೆರವೇರಿಸಿ, ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಸ್‌.ಡಿ‌.ಎಂ.ಸಿ.ಸದಸ್ಯರುಗಳಾದ ನಾರಾಯಣ ಟೈಲರ್, ದೇವಪ್ಪ ನಾಯ್ಕ್ ಮೂಡೆಕಲ್ಲು, ಮನೋಹರ ,ಲೀಲಾ ಬಾಬು ಮಣಿಯಾಣಿ, ದೈ.ಶಿಕ್ಷಕ ಚಂದ್ರಶೇಖರ ಉಪಸ್ಥಿತರಿದ್ದರು.


ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶೋಭಾ ವಂದಿಸಿದರು. ದೈ.ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ಮೇರ್ಕಜೆ ಮತ್ತು ಶಿಕ್ಷಕ ಉಣ್ಣಿಕೃಷ್ಣನ್ ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಕೂಟ ಇಂದು ಮತ್ತು ನಾಳೆ 2 ದಿನ ನಡೆಯಲಿದೆ.