ನಾಲ್ಕೂರು : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಪರಿಸರ ಹಾಗೂ ಸ್ವಚ್ಚತಾ ಅಭಿಯಾನ ಫಲಕ ಅನಾವರಣ

0

ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಾಲ್ಕೂರು ಪರಿಸರದ ಮುಖ್ಯ ರಸ್ತೆಗಳಲ್ಲಿ ಪರಿಸರ ಹಾಗೂ ಸ್ವಚ್ಚತಾ ಅಭಿಯಾನ ಫಲಕ ಅನಾವರಣ ಮಾಡಲಾಯಿತು.

ಜಾಗೃತಿ ನಾಮಫಲಕವನ್ನು ತಾಲೂಕು ಭಜನಾ ಪರಿಷತ್ ನಿರ್ದೇಶಕ ವಿಜಯಕುಮಾರ್ ಚಾರ್ಮತ , ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕೊಯಿಲ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಗುತ್ತಿಗಾರು ವಲಯ ಮೇಲ್ವಿಚಾರಕ ಶ್ರೀ ಬಾಲಕೃಷ್ಣ ಗೌಡ, ವಿಪತ್ತು ಸಂಯೋಜಕ ಹರಿಶ್ಚಂದ್ರ ಕುಳ್ಳಂಪ್ಪಾಡಿ, ಘಟಕ ಪ್ರತಿನಿಧಿ ಸತೀಶ್ ಬಂಬುಳಿ, ಹಾಗು ವಿಪತ್ತು ಸ್ವಯಂಸೇವಕರಾದ ಲೋಹಿತ್, ಕಾರ್ತಿಕ್, ಪ್ರಜ್ವಲ್, ಶೇಷಪ್ಪ ನಾಯ್ಕ್, ಚಂದ್ರಶೇಖರ, ಹರಿಪ್ರಸಾದ್, ಕರುಣಾಕರ ಮತ್ತಿತರರು ಉಪಸ್ಥಿತರಿದ್ದರು.