ಅ.21 ರಂದು ಮಂಡೆಕೋಲಿನಲ್ಲಿ ಆಯುಧ ಪೂಜೆ ಕಾರ್ಯಕ್ರಮ

0

ಸಾಂಸ್ಕೃತಿಕ ಸಂಭ್ರಮ : ಧಾರ್ಮಿಕ ಸಭೆ – ಸನ್ಮಾನ

ಹಿಂದು ಜಾಗರಣಾ ವೇದಿಕೆ ಮಂಡೆಕೋಲು ಮತ್ತು ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ‌ ಮಂಡೆಕೋಲು ಇದರ ಸಂಯುಕ್ತ ಆಶ್ರಯದಲ್ಲಿ 3 ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಮಂಡೆಕೋಲು ಅಯ್ಯಪ್ಪ ಸ್ವಾಮಿ‌ ಭಜನಾ ಮಂದಿರದಲ್ಲಿ‌ ಹಾಗೂ ಧಾರ್ಮಿಕ ಸಭೆಯು ಮಂಡೆಕೋಲು ಸಹಕಾರ ಸಂಘದ ಸಭಾಂಗಣದಲ್ಲಿ ಅ.21 ರಂದು ನಡೆಯುವುದು. ಇದರ ಆಮಂತ್ರಣ ಪತ್ರ ಬಿಡುಗಡೆಯು ಅ.12 ರಂದು ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿಂದು‌ ಜಾಗರಣಾ ವೇದಿಕೆಯ ತಾಲೂಕು ಸಂಚಾಲಕ ಮಹೇಶ್ ಉಗ್ರಾಣಿಮನೆ, ಸಾರ್ವಜನಿಕ ಆಯುಧ ಪೂಜಾ ಸೇವಾ ಸಮಿತಿ ಸಂಚಾಲಕ ಕುಮಾರನ್ ಮಾವಂಜಿ, ಮಂಡೆಕೋಲು ಹಿಂದು‌ಜಾಗರಣ ವೇದಿಕೆ ಸಂಚಾಲಕ ಹೇಮಂತ್ ಮಂಡೆಕೋಲು, ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಮಾ‌ ಹೆಬ್ಬಾರ್, ಸದಸ್ಯ ಬಾಲಚಂದ್ರ ದೇವರಗುಂಡ, ಮಾಜಿ ಅಧ್ಯಕ್ಷರುಗಳಾದ ವಿನುತಾ ಹರಿಶ್ಚಂದ್ರ ಪಾತಿಕಲ್ಲು, ಮೋಹಿನಿ ಚಂದ್ರಶೇಖರ, ಈಶ್ವರಚಂದ್ರ ಕೆ.ಆರ್, ರಘುಪತಿ‌ ಉಗ್ರಾಣಿಮನೆ, ಪೂರ್ಣಚಂದ್ರ ಕಣೆಮರಡ್ಕ, ಸಂಧ್ಯಾ ಮಂಡೆಕೋಲು, ಲಕ್ಷ್ಮಣ ಉಗ್ರಾಣಿಮನೆ, ಅಶ್ವತ್ ಕಣೆಮರಡ್ಕ, ಅನಂತಕೃಷ್ಣ ಪಾಂಗಾಣ್ಣಾಯ, ಗಂಗಾಧರ ಮಾವಂಜಿ, ನಾರಾಯಣ ಗೌಡ, ಸುಂದರ ಗೌಡ ಕಾಡುಸೊರಂಜ, ಪದ್ಮನಾಭ ಪಾತಿಕಲ್ಲು,ಗೋಪಾಲ ಗೌಡ ಮೇಲ್ಮನೆ, ರಂಗಣ್ಣ ಬೊಳುಗಲ್ಲು,ನಾರಾಯಣ ಶಿಬರಾಯ, ಮತ್ತು ಜಾಗರಣ ವೇದಿಕೆಯ ಪ್ರಮುಖ ಕಾರ್ಯಕರ್ತರು ಮೊದಲಾದವರಿದ್ದರು.