ನವರಾತ್ರಿ ಸಂಭ್ರಮಕ್ಕೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ‘ಸ್ವರ್ಣ ಹಬ್ಬ’

0

ಚಿನ್ನಾಭರಣಗಳ ಖರೀದಿ ಮೇಲೆ ಭರ್ಜರಿ ಉಳಿತಾಯದ ಅವಕಾಶ ಮತ್ತು ಸ್ವರ್ಣ ನಾಣ್ಯಗಳನ್ನು ನಿಮ್ಮದಾಗಿಸಿಕೊಳ್ಳುವ ಚಾನ್ಸ್!

ಸ್ವರ್ಣ್ಯೋದ್ಯಮ ಕ್ಷೇತ್ರದಲ್ಲಿ ಅಪರಂಜಿಯಂತೆ ಶೋಭಿಸುತ್ತಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪ್ರತೀ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಆಫರ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ.

ಅದರಂತೆ ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಪುತ್ತೂರಿನ ಜಿ.ಎಲ್. ಆಚಾರ್ಯ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅ.15 (ಆದಿತ್ಯವಾರದಿಂದ) ಅ.24 (ಮಂಗಳವಾರದವರೆಗೆ) ‘ಸ್ವರ್ಣ ಹಬ್ಬ’ ನಡೆಯಲಿದ್ದು, ಈ ಸಂದರ್ಭದಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಬಂಗಾರದ ಚೈನ್ ಖರೀದಿಗೆ ವಿ.ಎ.6%ನಿಂದ ಆರಂಭ, ಜಂಟ್ಸ್ ಕಡಗ ಖರೀದಿಗೆ ವಿ.ಎ. 6%ನಿಂದ ಪ್ರಾರಂಭ, ಆಂಟಿಕ್ ಜ್ಯುವೆಲ್ಲರ್ಸ್ ಖರೀದಿಗೆ ವಿ.ಎ 15%ನಿಂದ ಪ್ರಾರಂಭ, ಬ್ಯಾಂಗಲ್ಸ್ ಖರೀದಿಗೆ ವಿಎ 8%ನಿಂದ ಆರಂಭವಾಗಲಿದೆ.

ಇದರೊಂದಿಗೆ ನವರಾತ್ರಿ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ 9 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅತ್ಯಪೂರ್ವ ಅವಕಾಶವನ್ನು ಸಂಸ್ಥೆ ಒದಗಿಸುತ್ತಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವಾ ಬದ್ಧತೆಯೊಂದಿಗೆ ಆಭರಣ ಪ್ರಿಯರ ವಿಶ್ವಾಸಕ್ಕೆ ಪಾತ್ರವಾಗಿರುವ ಜಿ.ಎಲ್. ಅಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ಅತ್ಯಪೂರ್ವ ಸಂಗ್ರಹವಿದ್ದು, ಗ್ರಾಹಕರು ತಮ್ಮ ಮನಸ್ಸಿಗೊಪ್ಪುವ ಆಭರಣಗಳನ್ನು ಸಾವಕಾಶವಾಗಿ ವೀಕ್ಷಿಸಿ-ಯೋಚಿಸಿ ಖರೀದಿಸಲು ಅಗತ್ಯವಾಗಿರುವ ವಿಶಾಸಲವಾದ ಸ್ಥಳಾವಕಾಶ ಮತ್ತು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಗ್ರಾಹಕರ ಚಿನ್ನಾಭರಣ ಖರೀದಿಯ ಸಮಯವನ್ನು ಇನ್ನಷ್ಟು ಆರಾಮದಾಯಕಗೊಳಿಸುವಂತಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದ್ದು, ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.