ಅಜ್ಜಾವರ : ಮದರಸ ವಿದ್ಯಾರ್ಥಿಗಳ ರಬೀಹ್ ಫೆಸ್ಟ್

0


ತಖ್ ವಿಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿ ಅಜ್ಜಾವರ ಮೇನಾಲ ಇದರ ವತಿಯಿಂದ ನೂರುಲ್ ಇಸ್ಲಾಂ ಮದ್ರಸ ಅಜ್ಜಾವರ,ಮೇನಾಲ, ಬಯಂಬು,ಕಲ್ತಡ್ಕ ವಿದ್ಯಾರ್ಥಿಗಳ ರಬೀಅ ಫೆಸ್ಟ್ ಮಜಾಲ್ ಇಷ್ಕ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ವೇದಿಕೆಯಲ್ಲಿ ಜಮಾಹತ್ ಖತೀಬರಾದ ಅಬ್ದುಲ್ ಖಾದರ್ ಮುನ್ವರಿ,ಜಮಾಹತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ,ಉಪಾಧ್ಯಕ್ಷರಾದ ಅಂದ ಹಾಜಿ ಪ್ರಗತಿ,ಜಮಾಹತ್ ಖಜಾಂಜಿ ಶರೀಫ್ ರಿಲೇಕ್ಸ್, ಕಾರ್ಯದರ್ಶಿಗಳಾದ ಶಾಫಿ ಮುಕ್ರಿ,ಸ್ವರ್ಣ ಮಹಮ್ಮದ್,ಡೆಲ್ಮ ಸಿದ್ದಿಖ್,ಅಬೂಬಕ್ಕರ್ ಸಿ.ಎ, ಹಮೀದ್ ಬಯಂಬು,ಅಬ್ದುಲ್ಲ ಕೂಳಂಬೆ,ಜಮಾಹತ್ ಉಸ್ತಾದರುಗಳಾದ ಶಮೀರ್ ಹುದವಿ,ಅಬ್ಬಾಸ್ ಅನ್ಸಾರಿ,ಮುಯಿದ್ದೀನ್ ಅನ್ಸಾರಿ ,ರಫೀಕ್ ಮೌಲವಿ,ಅಬೂಬಕ್ಕರ್ ಅಝ್ ಹರಿ,ಹನೀಫ್ ಮೌಲವಿ,ಅಯ್ಯುಬ್ ಬಅಸನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಇಸ್ಲಾಂಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವಿಧಿ ನಿರ್ವಾಹಕರಾಗಿ ರಫೀಕ್ ಮೌಲವಿ ವಿಟ್ಲ,ಬಶೀರ್ ಅಝ್ ಹರಿ ಬಯಾರ್ ರವರು ನಿರ್ವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಜಮಾಹತ್. ಪ್ರದಾನ ಕಾರ್ಯದರ್ಶಿಯಾದ ಶಾಫಿ ಮುಕ್ರಿರವರಿಗೆ GCC ಕಮೀಟಿ ವತಿಯಿಂದ ಸದಸ್ಯರಾದ ಖಾದರ್ ಖತ್ತರ್,ಸಿದ್ದೀಖ್ ಮೊಟ್ಟೆ,ಉಮ್ಮರ್ ಕೂಳಂಬೆ ಹಾಗೂ HRS&BR COSTMETIC ರವರು ಸನ್ಮಾನಿಸಿದರು.
2022-23 ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳ ಕಲೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾಹತ್ ಎಲ್ಲಾ ಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.