ವಿಜಯದಶಮಿ ಪ್ರಯುಕ್ತ ರಾಷ್ಟ್ರ ಸೇವಿಕ ಸಮಿತಿಯಿಂದ ಸುಳ್ಯದಲ್ಲಿ ಪಥ ಸಂಚಲನ

0

ರಾಷ್ಟ್ರ ಸೇವಿಕ ಸಮಿತಿ ಹೊಯ್ಸಳ ಪ್ರಾಂತ – ಮಂಗಳೂರು ವಿಭಾಗ ಪುತ್ತೂರು ಜಿಲ್ಲೆ ಇದರ ಆಶ್ರಯದಲ್ಲಿ ವಿಜಯದಶಮಿ ಉತ್ಸವದ ಪ್ರಯುಕ್ತ ಪಥ ಸಂಚಲನ ಸುಳ್ಯದಲ್ಲಿ ಅ.18 ರಂದು ನಡೆಯಿತು.

ಸುಳ್ಯದ ಜ್ಯೋತಿ ವೃತ್ತದಿಂದ ಆರಂಭ ಗೊಂಡ ಪಥ ಸಂಚಲನ ಸುಳ್ಯ ಮುಖ್ಯರಸ್ತೆಯಾಗಿ ಸಾಗಿ, ಗಾಂಧಿನಗರ, ರಥಬೀದಿಯಾಗಿ ಸಾಗಿ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪ್ತಿಯೊಂಡಿತು.

ಶಾಸಕಿ ಭಾಗೀರಥಿ ಮುರುಳ್ಯ ಸಹಿತ ನೂರಾರು ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ಚೆನ್ನಕೇಶವ ದೇವಸ್ಥಾನದ ಬಳಿ ಸಭಾ ಕಾರ್ಯಕ್ರಮ ನಡೆಯಿತು.