ಅಡ್ಪಂಗಾಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ದುರ್ಗಾ ಪೂಜೆ

0

ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಸನ್ಮಾನ

ಅಡ್ಪಂಗಾಯದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ತುಲಾಸಂಕ್ರಮಣದ ಪ್ರಯುಕ್ತ ಭಜನಾ ಕಾರ್ಯಕ್ರಮ ಹಾಗೂ ವಿಶೇಷ ಸೇವಾ ಪ್ರಯುಕ್ತ ಶ್ರೀ ದುರ್ಗಾ ಪೂಜೆಯು ನಿನ್ನೆ ನಡೆಯಿತು.


ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರ ಗುರು ನಗರ ಮಂಡೆಕೋಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನವೀನ್ ಕುಮಾರ್ ಬೆಂಗಳೂರು, ಪ್ರತೀಕ್ ಕಡಬ, ತಿಮ್ಮಯ್ಯ ಮಡಿಕೇರಿ ಇವರುಗಳ ವಿಶೇಷ ಸೇವಾ ಪ್ರಯುಕ್ತ ದುರ್ಗಾ ಪೂಜೆ ನೆರವೇರಿತು. ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಧರ್ಮದರ್ಶಿ ಶಿವಪ್ರಕಾಶ್ ಗುರುಸ್ವಾಮಿ ನೇತೃತ್ವ ವಹಿಸಿದ್ದರು.


ಇದೇ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ನಿವೃತ್ತ ಯೋಧ ಸುರೇಶ್, ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ, ಗಾಯಕ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಮದ್ಯಮುಕ್ತ ಜೀವನದಿಂದ ಯಶಸ್ಸು ಸಾಧಿಸಿದ ಹರೀಶ್ ಅವರನ್ನು ಸನ್ಮಾನಿಸಲಾಯಿತು. ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.