ಅರಂತೋಡು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭೇಟಿ Copy

0

ಆಂಗ್ಲ ಮಾದ್ಯಮ ತರಗತಿ ಮಂಜೂರಾತಿಗೆ ಮನವಿ ಸಲ್ಲಿಕೆ

ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಆಚರಿಸಿದ್ದು, ಶಾಲಾ ಅಭಿವೃಧಿ ಸಮಿತಿಯ ವತಿಯಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ಯು. ಟಿ. ಖಾದರ್ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಆಂಗ್ಲ ಮಾಧ್ಯಮ ತರಗತಿ ಮಂಜೂರಾತಿ ಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.

ಅಲ್ಲದೇ ಶಾಲೆಯನ್ನು ಅಭಿವೃದ್ಧಿ ಪಡಿಸುವ ಕುರಿತು ಮನವಿ ನೀಡಲಾಯಿತು. ಯು.ಟಿ. ಖಾದರ್ ಅವರು ಅರಂತೋಡು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಕಾರ ವನ್ನು ನೀಡುವುದಾಗಿ ಭರವಸೆ ನೀಡಿದರೆಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ಕೃಷ್ಣಬನ, ಶಾಲಾ ಎಸ್. ಡಿ.ಎಂ. ಸಿ. ಅಧ್ಯಕ್ಷ ಸುರೇಶ ಉಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆಮೀರ್ ಕುಕ್ಕುಂಬಳ, ಎಸ್. ಡಿ. ಎಂ. ಸಿ. ಸದಸ್ಯ ಸಂಶುದ್ಧೀನ್ ಅರಂತೋಡು , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರಾಜೀವಿ ರೈ ಬೆಳ್ಳಾರೆ, ತಾಜುದ್ದೀನ್ ಆರಂತೋಡು ಉಪಸ್ಥಿತರಿದ್ದರು.