ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಾರ್ಥನೆ ವಿಚಾರ ದೇವಸ್ಥಾನದ ಗಮನಕ್ಕೆ ಬಂದಿಲ್ಲ

0

ರಂಗಪೂಜೆಯ ನಂತರವೇ ಪ್ರಾರ್ಥನೆಗೆ ಅವಕಾಶ

ಕೇರ್ಪಡ ದೇವಸ್ಥಾನ ಆಡಳಿತ ಮಂಡಳಿ ಹೇಳಿಕೆ

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೇರ್ಪಡ ದೇವಸ್ಥಾನದಲ್ಲಿ ನಾಳೆ ರಾತ್ರಿ 7.30 ಕ್ಕೆ ಸಾಮೂಹಿಕ ಪ್ರಾರ್ಥನೆಯ ಕಾರ್ಯಕ್ರಮವಿದೆ ಎಂದು ಪ್ರಚಾರಪಡಿಸಲಾಗಿದೆ. ಆದರೆ ಕಾರ್ಯಕ್ರಮದ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿದಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಹೇಳಿಕೆ ನೀಡಿದೆ.


ನವರಾತ್ರಿ ಉತ್ಸವದ ಕಾರ್ಯಕ್ರಮ ಸಂದರ್ಭದಲ್ಲಿ ಸೇವಾ ರಂಗಪೂಜೆಯ ನಂತರ ಪ್ರಾರ್ಥನೆಗೆ ಅವಕಾಶವಿರುತ್ತದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಂದು ಪ್ರಾರ್ಥನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.