ಸಂಪಾಜೆಯಲ್ಲಿ ಗೋ ರಥಕ್ಕೆ ಸ್ವಾಗತಿಸಿದ ಗ್ರಾಮಸ್ಥರು

0

ಶ್ರೀ ರಾಧಾ ಸುರಭಿ ಗೋ ಮಂದಿರ , ರಾಷ್ಟ್ರೀಯ ಗೋಸೇವಾ ಸಂಸ್ಥಾನ ಮತ್ತು ಗೋಸೇವಾ ಗತಿನಿಧಿ ಕರ್ನಾಟಕ ಇದರ ನೇತೃತ್ವದಲ್ಲಿ ನಡೆಯುತ್ತಿರುವ ಗೋರಥವನ್ನು ಅ.21ರಂದು ಸಂಜೆ ಸಂಪಾಜೆಯಲ್ಲಿ ಗ್ರಾಮಸ್ಥರು ಸ್ವಾಗತಿಸಿ, ಗೋಪೂಜೆ ನೆರವೇರಿಸಲಾಯಿತು.

ಕೊಡಗು ಸಂಪಾಜೆ ಪೆಟ್ರೊಲ್ ಪಂಪ್ ಬಳಿ ಆಗಮಿಸಿದ ಗೋರಥಕ್ಕೆ ಗ್ರಾಮಸ್ಥರು ಹೂಹಾರ ಹಾಕಿ ಸ್ವಾಗತಿಸಿದರು. ಬಳಿಕ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಅಲ್ಲಿ ಗೋವುಗಳಿಗೆ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಕಳಗಿ, ರಾಜಾರಾಮ ಕಳಗಿ, ಓ.ಆರ್. ಮಾಯಿಲಪ್ಪ ಸಂಪಾಜೆ, ಸುಂದರ ಚಿಟ್ಟೆಕ್ಕಾನ, ಜಗದೀಶ್ ಕೆದಂಬಾಡಿ, ನಾರಾಯಣ, ಉದಯ, ಅಜಿತ್ , ತಿಲಕ್ ಕಳಗಿ, ಕಿರಣ ಬಾಲೆಂಬಿ , ರಾಮಕೃಷ್ಣ ಕುಕ್ಕಂದೂರು, ವೆಂಕಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.