ಡಾ. ಅನುರಾಧಾ ಕುರುಂಜಿಯವರಿಗೆ ಕಾಸರಗೋಡು ದಸರಾ ಸಾಧಕ ಸನ್ಮಾನ ಗೌರವ

0

ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2023 ಕಾರ್ಯಕ್ರಮರಲ್ಲಿ “ಹಾಸರಗೋಡು ದಸರಾ ಸಾಧಕ ಸನ್ಮಾನ “ ನೀಡಿ ಗೌರವಿಸಲಾಯಿತು.

ಶ್ರೀಮದ್ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಶಾಲು, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ರಾಧಾಕೃಷ್ಣ ಕೆ ಉಳಿಯತಡ್ಕ, ಕಾರ್ಯಕ್ರಮ ಸಂಯೋಜಕ ವಾಮನ್ ರಾವ್, ಶ್ರೀಮತಿ ಸಂಥ್ಯಾರಾಣಿ ಟೀಚರ್, ವೆಂಕಟ್ ಭಟ್ ಎಡನೀರು, ಪತ್ರಕರ್ತ ಪ್ರದೀಪ್ ಬೇಕಲ್, ಟಿ ತ್ಯಾಗರಾಜ್ ಮೈಸೂರು, ಜಯಾನಂದ್ ಪೆದಾಜೆ, ವೀಜಿ ಕಾಸರಗೋಡು , ಡಾ. ಶೈಲಾ ಮಂಗಳೂರು, ಶ್ರೀಮತಿ ಶಾಂತಾ ಪುತ್ತೂರು, ವಿರಾಜ್ ಅಡೂರು, ಎ ಶ್ರೀನಾಥ್ ಮೊದಲಾದವರು ಉಪಸ್ಥಿತರಿದ್ದರು.