ಬೆಳ್ಳಾರೆಯಲ್ಲಿ ಶ್ರೀ ಭಗವತಿ ಸ್ಟೋರ್ಸ್ ಮತ್ತು ಜ್ಯೂಸ್ ಸೆಂಟರ್ ಶುಭಾರಂಭ

0

ಮಹಾಲಿಂಗ ಪಾಟಾಳಿ ಮತ್ತು ಶ್ರೀಮತಿ ಚೈತ್ರಾ ಮಹಾಲಿಂಗ ಪಾಟಾಳಿ ಮಾಲಕತ್ವದ ಶ್ರೀ ಭಗವತಿ ಸ್ಟೋರ್ಸ್ ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಇಂದು ಶುಭಾರಂಭಗೊಂಡಿತು.
ಬೆಳ್ಳಾರೆಯ ಅಜಿಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಅ. 20ರಂದು ಗಣಪತಿ ಹೋಮ ನಡೆಸಿಕೊಟ್ಟರು.
ಅ. 23ರಂದು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಅರ್ಚಕರಾದ ಅಣ್ಣು ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಮಹಾಲಿಂಗ ಪಾಟಾಳಿಯವರ ಪತ್ನಿ ಶ್ರೀಮತಿ ಚೈತ್ರಾ ಮತ್ತು ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.
ನೂತನ ಸಂಸ್ಥೆಯಲ್ಲಿ ಜಿನಸು ಸಾಮಾಗ್ರಿಗಳು, ‌ಬೇಕರಿ ತಿಂಡಿ, ತಿನಿಸುಗಳು, ಫ್ರೆಶ್ ಜ್ಯೂಸ್, ಸ್ವೀಟ್ ಕಾರ್ನ್, ಕಬ್ಬು ಜ್ಯೂಸ್, ಪಾನ್ ಬೀಡ, ಸಾದಾ ಬೀಡ ಇತ್ಯಾದಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.