ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ‌ ಉತ್ಸವ ಸಮಾಪ್ತಿ

0

ಇಂದು ಹೊಸ ಅಕ್ಕಿ ಬಲಿವಾಡು ಕೂಟದಲ್ಲಿ ಭಾಗಿಯಾದ‌ ನೂರಾರು ಭಕ್ತರು

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ‌ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಮಾಪ್ತಿಗೊಂಡಿತು. ಇಂದು ಹೊಸ ಅಕ್ಕಿ ಬಲಿವಾಡು ಕೂಟ ನಡೆಯಿತು.


ಅ.15ರಿಂದ ಅ.23ರವರೆಗೆ ದೇವಸ್ಥಾನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು. ಹಾಗೂ ನವರಾತ್ರಿ ಸಂದರ್ಭದಲ್ಲಿ ರಾತ್ರಿ 7 ಗಂಟೆಯಿಂದ 8 ಗಂಟೆಯವರಿಗೆ ಉಭಯ ಗ್ರಾಮದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.‌

ಕಾರ್ಯಕ್ರಮ ದ ಪ್ರಯುಕ್ತ ಅ.22 ಮತ್ತು ಅ.23ರಂದು ಸಂಜೆ ಆಹ್ವಾನಿತ ಕಲಾವಿದರಿಂದ‌ ಯಕ್ಷಗಾನ ತಾಳಮದ್ದಳೆ ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ರಾದ ರಾಘವ ಗೌಡ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಸೇವಾ ಸಮಿತಿ‌ ಅಧ್ಯಕ್ಷ ಕಮಾಲಕ್ಷ ಪುರ, ಅನ್ನಪೂರ್ಣ ಸಮಿತಿ ಅಧ್ಯಕ್ಷ ದಯಾನಂದ ಪುರ, ಭಜನಾ ಮಂಡಳಿ ಅಧ್ಯಕ್ಷ ಮಹೇಶ್ ಪುರ ಹಾಗೂ ಸಮಿತಿಯ ಸದಸ್ಯರು ಸೇರಿದಂತೆ ಊರ-ಪರ ಭಕ್ತಾಧಿಗಳು ಉಪಸ್ಥಿತರಿದ್ದರು.


ದೇವಾಲದ ಅರ್ಚಕರಾದ ಗಣೇಶ್ ಪ್ರಸಾದ್ ಭಟ್ ಹಾಗೂ ಅರ್ಚಕ ವೃಂದವರು‌ ಪೂಜಾ ಕಾರ್ಯಕ್ರಮ ನೆರವೇರಿಸಿದರು.‌