ಚೊಕ್ಕಾಡಿ : ಸಾಮೂಹಿಕ ಗೋಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿಶ್ವ ಹಿಂದೂ ಪರಿಷದ್ ಬಜರಂಗದಳ, ವಜ್ರಕಾಯ ಶಾಖೆ ಪದವು ಚೊಕ್ಕಾಡಿ ಸುಳ್ಯ ಪ್ರಖಂಡ ಇದರ ವತಿಯಿಂದ ಸಾಮೂಹಿಕ ಗೋಪೂಜಾ ಹಾಗೂ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಚೊಕ್ಕಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಸನ್ನಿಧಾನದಲ್ಲಿ‌ ಇಂದು ಬೆಳಿಗ್ಗೆ ನಡೆಯಿತು.

ಸಾನಿಧ್ಯದ ನಾಯರ್ ಪೂಜಾರಿ ಕುಸುಮಾಧರ ಕೊಳಂಬೆರವರು ಆಮಂತ್ರಣ ‌ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮ ಕ್ಕೆ ಶುಭಹಾರೈಸಿದರು.

ಚೊಕ್ಕಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ಅಮರಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭುವನೇಶ್ವರಿ ಸಿ.ಎಸ್.,
ವಿಶ್ವ ಹಿಂದೂ ಭಜರಂಗದಳ ಸುಳ್ಯ ಪ್ರಖಂಡ ಇದರ ಸಹಸಂಯೋಜಕ ಸನತ್ ಪದವು, ಅಮರಮುಡ್ನೂರು ಗ್ರಾ.ಪಂ. ಸದಸ್ಯೆ ಶ್ರೀಮತಿ ಸೀತಾ ಹೆಚ್., ದೊಡ್ಡತೋಟ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಮಹೇಶ್ ಮೇರ್ಕಜೆ, ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಅಕ್ಕೋಜಿಪಾಲ್ ಇದರ ಕಾರ್ಯದರ್ಶಿ ಹರೀಶ್ ಎಂ. ರವರು ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವಿನಯ ಪಾಡಾಜೆ, ಉಪಾಧ್ಯಕ್ಷ ಮಿಥುನ್ ಚೊಕ್ಕಾಡಿ, ಕಾರ್ಯದರ್ಶಿ ರಾಜೇಶ್ ನೇರಳಡ್ಕ, ಸಂಚಾಲಕ ಸತೀಶ ಪದವು, ಸದಸ್ಯರಾದ ಪುನಿತ್ ಸಂಕೇಸ, ಬೋಜಪ್ಪ ಕೇನಡ್ಕ, ಪ್ರಶಾಂತ್ ಪಾಡಾಜೆ, ಮಿಥುನ್ ಪದವು, ಶರಣ್ ಕರ್ಮಾಜೆ, ದೀಕ್ಷಿತ್ ಅಮೆಬೈಲು, ಸುದರ್ಶನ್ ಪದವು, ನವೀನ್ ಕಣಪ್ಪಿಲ ಹಾಗೂ ಸ್ಥಳೀಯರಾದ ಯೋಗೀಶ್ ಕೊಂಡೆಬಾಯಿ ಉಪಸ್ಥಿತರಿದ್ದರು.