ಶ್ರೇಷ್ಠ ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್ ಆಲೆಟ್ಟಿ ಯವರಿಗೆ ಕುರಿಂಜ ನಾರಾಯಣ ಮಣಿಯಾಣಿ ಕುಟುಂಬಸ್ಥರಿಂದ ಸನ್ಮಾನ

0

ಆಲೆಟ್ಟಿ ಗ್ರಾಮದ ಅಚ್ಚುತ ಮಣಿಯಾಣಿ ಯವರ ಪುತ್ರ ಆಲೆಟ್ಟಿ ಭಜನಾ ಸಂಘದ ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ ಯವರ ವಿವಾಹದ ಅಂಗವಾಗಿ ನಡೆದ ಮದರಂಗಿ ಶಾಸ್ತ್ರ ಕಾರ್ಯಕ್ರಮದಲ್ಲಿ ಶ್ರೇಷ್ಠ ಭಜನಾ ಸಾಧಕ ಪ್ರಶಸ್ತಿಗೆ ಭಾಜನರಾದ ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಯವರನ್ನು ಕುರಿಂಜ ನಾರಾಯಣ ಮಣಿಯಾಣಿ ಯವರ ಕುಟುಂಬಸ್ಥರ ಪರವಾಗಿ ಅ.31 ರಂದು ಸನ್ಮಾನಿಸಲಾಯಿತು.

ಹಿರಿಯರಾದ ಕುರಿಂಜ‌ ನಾರಾಯಣ ಮಣಿಯಾಣಿ ಮತ್ತು ಶ್ರೀಮತಿ ಸೀತಮ್ಮ ದಂಪತಿ ಯವರು ಆಶೀರ್ವದಿಸಿದರು. ಸದಾಶಿವ ದೇವಸ್ಥಾನದ ಮೊಕ್ತೇಸರರ ಪೈಕಿ ಜಯಪ್ರಕಾಶ್ ಬೈಪಡಿತ್ತಾಯ ರವರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಕೊರಗಪ್ಪ ಮಾಸ್ತರ್ ಕಣಕ್ಕೂರು, ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಂದರ ಮಣಿಯಾಣಿ, ರಾಮಚಂದ್ರ ಆಲೆಟ್ಟಿ ಹಾಗೂಮನೆಯವರು,
ಕುಟುಂಬಸ್ಥರು,ಬಂಧುಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.