ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ

0

ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷೆ ಲಯನ್ ರೇಣುಕಾ ಸದಾನಂದ ಜಾಕೆ ದಂಪತಿಗಳ ಅಧಿಕೃತ ಭೇಟಿ ಕಾರ್ಯಕ್ರಮ ಅ‌.31ರಂದು ನಡೆಸಲಾಯಿತು. ಈ ಸಂದರ್ಭ ಸೇವಾ ಚಟುವಟಿಕೆಯಾಗಿ ಮರ್ದಾಳ ಮರಿಯಾಲಯಂ ನಿರ್ಗತಿಕರ ಮಹಿಳೆಯರ ಆಶ್ರಮಕ್ಕೆ ಗ್ಯಾಸ್ ಸ್ಟವ್, ದೋಸೆ ಹಂಚು, 50 kg ಅಕ್ಕಿ ದಿನಬಳಕೆ ವಸ್ತುಗಳು, ಬಟ್ಟೆಬರೆಗಳನ್ನು ನೀಡಲಾಯಿತು.ವಾಹನ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬಡ ವಿದ್ಯಾರ್ಥಿನಿಗೆ ಧನಸಹಾಯ, ಅನಾರೋಗ್ಯ ಪೀಡಿತ ವ್ಯಕ್ತಿಗೆ ವಾಟರ್ ಬೆಡ್ ಮತ್ತು ಧನಸಹಾಯ, ಅನಾರೋಗ್ಯ ಪೀಡಿತ ವಿದ್ಯಾರ್ಥಿನಿಗೆ ಧನಸಹಾಯ, ವಾಲ್ತಾಜೆ ಅಂಗನವಾಡಿಗೆ ಚಯರ್ ಕೊಡುಗೆ ನೀಡಲಾಯ್ತು. ರಾಷ್ಟ್ರೀಯ ಮಟ್ಟದ ಕರಾಟೆ ಪಟು ಚೇತನ್ ಮುಂಡೋಡಿಗೆ ಸನ್ಮಾನ ಮಾಡಲಾಯಿತು. ಕೊಡುಗೆಗಳು ಮತ್ತು ಸನ್ಮಾನವನ್ನು ಪ್ರಾಂತ್ಯಾಧ್ಯಕ್ಷರು ನೆರವೇರಿಸಿದರು.

ಸೇವಾಚಟುವಟಿಕಗಳಿಗೆ ಸರೋಜಿನಿ ಗಂಗಯ್ಯ, ಪದ್ಮಿನಿ ನಾಗೇಶ್ ಪಾರೆಪ್ಪಾಡಿ, ಕುಶಾಲಪ್ಪ ಮಾಸ್ಟರ್, ವೆಂಕಪ್ಪ ಕೇನಾಜೆ, ಮಣಿ ಮುಂಡೋಡಿ, ಜಯರಾಮ ಕಡ್ಲಾರ್, ರಕ್ಷಿತ್ ಕಡ್ಲಾರ್, ಬಾಲಕೃಷ್ಣ ಕೆ ಯವರು ಕೈ ಜೋಡಿಸಿದರು. ಬಟ್ಟೆಬರೆ ನೀಡುವಲ್ಲಿ ಮಾಜಿ ರಾಜ್ಯಪಾಲರಾದ ಲಯನ್ಸ್ ನ ಎಂ ಬಿ ಸದಾಶಿವ, ಪ್ರಸನ್ನ ನಿತ್ಯಾನಂದ ಮುಂಡೋಡಿ, ಜಿಸ್ಮಿ ಲಿಜೋ, ಪ್ರಮೀತಾ ಬಾಲಕೃಷ್ಣ, ವಿಜಯಲಕ್ಷ್ಮಿ ವಿಜಯಕುಮಾರ್, ಸರೋಜಿನಿ ಗಂಗಯ್ಯ, ನವೀನ್ ಬಾಳುಗೋಡು ಸಹಕರಿಸಿದರು.