ಪೈಲಾರು: ಶಾಂತಿಮೂಲೆ ಎಂಬಲ್ಲಿ ರಸ್ತೆ ಮೇಲೆ ಮರ ಬಿದ್ದು ಅಡಚಣೆ- ತೆರವುಗೊಳಿಸಿದ ಪಂಚಾಯತ್ ಸದಸ್ಯರು

0

ಅಮರಮುಡ್ನೂರು ಗ್ರಾಮದ ಪೈಲಾರು ನಾಯರ್ ಕಲ್ಲು ರಸ್ತೆಯ ಶಾಂತಿಮೂಲೆ ಎಂಬಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ರಸ್ತೆ ಮೇಲೆ ಮರವೊಂದು ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು.

ಬೆಳಗ್ಗೆ ಪಂಚಾಯತ್ ಸದಸ್ಯ ಕೃಷ್ಣ ಪ್ರಸಾದ್ ಮಾಡಬಾಕಿಲು ರವರ ನೇತೃತ್ವದಲ್ಲಿ ಮರ ತೆರವು ಕಾರ್ಯಾಚರಣೆ ಮಾಡಲಾಯಿತು. ಸ್ಥಳೀಯರಾದ ಕುಶಾಲಪ್ಪ ಮಾಡಬಾಕಿಲು, ಶಿವಪ್ರಕಾಶ್ ಮೋಂಟಡ್ಕ,ಯೋಗೀಶ್ ಮಾಡಬಾಕಿಲು, ಜೈದೀಪ್ ಕಡಪಳ, ಧನುಷ್ ಮಾಡಬಾಕಿಲು, ಹಿತೇಶ್ ಮೂಕಮಲೆ, ಜಯಂತ್ ನಾಯರ್ ಕಲ್ಲು ಮತ್ತಿತರರು ಸಹಕರಿಸಿದರು.