ಪಂಜ: ದಿ.ತಿಮ್ಮಪ್ಪ ಗೌಡ ಕಮಿಲ ರವರಿಗೆ ಶ್ರದ್ಧಾಂಜಲಿ ಸಭೆ

0

ಪಂಜದ ಕಮಿಲ ತಿಮ್ಮಪ್ಪ ಗೌಡ ರವರು ಅ.21 ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ -ನುಡಿನಮನ ವೈಕುಂಠ ಸಮಾರಾಧನೆ ಕಾರ್ಯಕ್ರಮ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನ.6 ರಂದು ನಡೆಯಿತು.ಮೃತರ ಅಳಿಯ ದೈಹಿಕ ಶಿಕ್ಷಣ ಶಿಕ್ಷಕ ವಿಜಯಕುಮಾರ್ ಅಮೈ ನುಡಿನಮನ ಸಲ್ಲಿಸಿದರು. ಸಹೋದರ ನಿವೃತ್ತ ಶಿಕ್ಷಕ ನಾರಾಯಣ ಕಮಿಲ ರವರು ಸ್ವಾಗತಿಸಿದರು ಮತ್ತು ನಿರೂಪಿಸಿದರು.


ಮೃತರ ಪುತ್ರಿಯರಾದ ಶ್ರೀಮತಿ ಮಮತಾ ವಿಜಯಕುಮಾರ್ ಅಮೈ ಏನೆಕಲ್ಲು, ಶ್ರೀಮತಿ ಮಲ್ಲಿಕಾ ಪ್ರವೀಣ್ ಕಾಯರ, ಶ್ರೀಮತಿ ದಿವ್ಯಾ ವಸಂತ ಕುಮಾರ್ ಮೇರ್ಕಜೆ ದೊಡ್ಡತೋಟ, ಶ್ರೀಮತಿ ಹರ್ಷಿತಾ ಪ್ರಸಾದ್ ದೊಡ್ಡಿಹಿತ್ಲು ಕೊಲ್ಲಮೊಗ್ರು, ಅಳಿಯಂದಿರಾದ ವಿಜಯಕುಮಾರ್ ಅಮೈ,ಪ್ರವೀಣ್ ಕಾಯರ,ವಸಂತ ಕುಮಾರ್ ಮೇರ್ಕಜೆ ದೊಡ್ಡತೋಟ,ಪ್ರಸಾದ್ ದೊಡ್ಡಿಹಿತ್ಲು ಕೊಲ್ಲಮೊಗ್ರು,ಮೊಮ್ಮಕ್ಕಳು,
ಕುಟುಂಬಸ್ಥರು, ನೆಂಟರಿಷ್ಟರು,ಬಂಧು ಮಿತ್ರರು ಪಾಲ್ಗೊಂಡಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.