ಜಾಲ್ಸೂರು: ಕೂಂದ್ರುಕೋಡಿಯಲ್ಲಿ ಸೇವಾಭಾರತಿ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣ ಕಾರ್ಯಕ್ಕೆ ವೇಗ

0

ಜಾಲ್ಸೂರು ಗ್ರಾಮದ ಕೂಂದ್ರುಕೋಡಿಯಲ್ಲಿ ಲಕ್ಷ್ಮಿ ಎಂಬ ಬಡ ಮಹಿಳೆಯೋರ್ವರಿಗೆ ಸೇವಾ ಭಾರತಿ ವತಿಯಿಂದ ಮನೆ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಾ ಸಂಕಷ್ಟಪಡುತ್ತಿದ್ದ ಲಕ್ಷ್ಮಿ ಅವರ ಪರಿಸ್ಥಿತಿ ಕುರಿತು ‘ಸುದ್ದಿ’ ಮಾಧ್ಯಮದಲ್ಲಿ ವರದಿ ಪ್ರಸಾರಗೊಂಡಿತ್ತು.

ಇದರ ಬಳಿಕ ಈ ಪ್ರಕ್ರಿಯೆಗೆ ವೇಗ ದೊರೆತು ಬಡ ಮಹಿಳೆಗೆ ಸೇವಾ ಭಾರತಿ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದ್ದು, ಈಗಾಗಲೇ ಫೌಂಡೇಶನ್ ಮೇಲೆ ಕೆಂಪು ಕಲ್ಲು ಕಟ್ಟುವ ಕಾಮಗಾರಿ ನಡೆಯುತ್ತಿದ್ದು, ಮನೆ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿರುವ ಲತೀಶ್ ಗುಂಡ್ಯ ಅವರ ನೇತೃತ್ವದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.