ನಾಳೆ (ನ.12): ಪಂಜದಲ್ಲಿ ತಾಳಮದ್ದಳೆ ಸಪ್ತಾಹ

0


ಪ್ರಸಂಗ- ‘ಮೋಕ್ಷ ಸಂಗ್ರಾಮ’


ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದೀಪಾವಳಿ ವಿಶೇಷ ತಾಳಮದ್ದಳೆ ಸಪ್ತಾಹ
2023 -2024 ನ.12 ರಂದು ಅಪರಾಹ್ನ ಗಂಟೆ 2.30 ರಿಂದ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದ ಸಭಾಭವನದಲ್ಲಿ ಜರುಗಲಿದೆ.


ಕಾರ್ಯಕ್ರಮಕ್ಕೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ ಕಂಬಳ ದೀಪ ಪ್ರಜ್ವಲನೆ ಗೊಳಿಸಲಿದ್ದಾರೆ.


“ಮೋಕ್ಷ ಸಂಗ್ರಾಮ”ಪ್ರಸಂಗ ನಡೆಯಲಿದ್ದು, ಭಾಗವತರಾಗಿ ಪ್ರಶಾಂತ್ ರೈ, ರಚನಾ ಚಿದ್ಗಲ್, ಚಂಡೆ ಮತ್ತು ಮದ್ದಳೆ ಕುಮಾರ ಸುಬ್ರಹ್ಮಣ್ಯ ವಳಕುಂಜ, ಬಾಲಸುಬ್ರಹ್ಮಣ್ಯ ದೇವಸ್ಯ, ಗಗನ್ ಪಂಜ, ಅರ್ಥದಾರಿಗಳಾಗಿ ವೆಂಕಟ ರಾಮ್ ಭಟ್ ಸುಳ್ಯ, ಸತ್ಯಶಂಕರ್ ಮಲೆಯಾಳ, ಶಿವಕುಮಾರ್, ವೆಂಕಟೇಶ್ ಕುಮಾರ್ ಉಳುವಾನ ಪಾಲ್ಗೊಳ್ಳಲಿದ್ದಾರೆ ಎಂದು ಟ್ರಸ್ಟಿನ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.