ಪೈಲಾರು -ನಾಯರ್ ಕಲ್ಲು ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

0

ಅಮರಮುಡ್ನೂರು ಗ್ರಾಮದ ಪೈಲಾರು ನಾಯರ್ ಕಲ್ಲು ಸಂಪರ್ಕದ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು ಸ್ಥಳೀಯ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಇಟ್ಟಿಗುಂಡಿ ಮತ್ತು ಕೃಷ್ಣಪ್ರಸಾದ್ ಮಾಡಬಾಕಿಲು ರವರ ಮುತುವರ್ಜಿಯಿಂದ ಪಂಚಾಯತ್ ಹಾಗೂ ತಾ.ಪಂ. ಅನುದಾನ
ರೂ.3.5 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿಗೆ ಶಾಸಕಿ ಕು.ಭಾಗೀರಥಿ ಮುರುಳ್ಯ ರವರು ನ.11 ರಂದು ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ
ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪಂ.ಅಧ್ಯಕ್ಷೆ ಜಾನಕಿ‌ ಕಂದಡ್ಕ, ಉಪಾಧ್ಯಕ್ಷೆ ಭುವನೇಶ್ವರಿ ಪದವು, ಸದಸ್ಯರಾದ ದಿವ್ಯ ಮಡಪ್ಪಾಡಿ, ಜನಾರ್ದನ ಪೈಲೂರು, ಸೊಸೈಟಿ ಅಧ್ಯಕ್ಷ ಕೇಶವ ಕರ್ಮಾಜೆ, ಮಾಜಿ ಅಧ್ಯಕ್ಷ ಸದಾಶಿವ ಗೌಡ ಮೂಕಮಲೆ, ನಿರ್ದೇಶಕ ಅರುಣ್ ಕುಮಾರ್ ನಾಯರ್ ಕಲ್ಲು, ಗಣೇಶ್ ಪಿಲಿಕಜೆ,
ನಿರಂಜನ್ ಕೋಡ್ತುಗುಳಿ,
ಹಿರಿಯರಾದ ಪುಟ್ಟಣ್ಣ ಗೌಡ ನಾಯರ್ ಕಲ್ಲು,ಎಂ.ಟಿ ಶಾಂತಿಮೂಲೆ, ತಿರುಮಲೇಶ್ವರ ದಂಬೆತೋಟ,
ತೇಜಸ್ವಿ ಕಡಪಳ,ಯೋಗೀಶ್ ಮಾಡಬಾಕಿಲು, ಗುತ್ತಿಗೆದಾರ ಹರಿಪ್ರಸಾದ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.