ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಯಕ್ಷಗಾನ ತರಬೇತಿ ಶಿಬಿರ

0

ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಹಾಗೂ
ಶಿವಾಜಿ ಯುವ ವೃಂದ ಹಳೆಗೇಟು,ಶಿವಾಜಿ ಗೆಳೆಯರ ಬಳಗ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಮುಖೇಶ್ ಬೆಟ್ಟಂಪಾಡಿಯವರ ಸಂಯೋಜನೆಯಲ್ಲಿ ಉಚಿತ ಯಕ್ಷಗಾನ ತರಬೇತಿ ತರಗತಿಯ ಶಿಬಿರವು ನ.12 ರಂದು ಆರಂಭಗೊಂಡಿತು.

ಯಕ್ಷಗಾನ ಗುರುಗಳಾದ ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್,
ಕಾರ್ಯದರ್ಶಿ ಭಾಸ್ಕರ್ ಎಂ.ಎಸ್,ಮಂಜುನಾಥೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಬೆಟ್ಟಂಪಾಡಿ,ಭಜನಾ ಮಂಡಳಿಯ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸನತ್ ಬರಮೇಲು ಉಪಸ್ಥಿತರಿದ್ದರು.
ಬಳಿಕ ಯಕ್ಷಗಾನ ಗುರು ಶಶಿಕುಮಾರ್ ಕಾವು ರವರು ತರಬೇತಿ ಕಾರ್ಯಗಾರ ನಡೆಸಿದರು. ಪರಿಸರದ ಮಕ್ಕಳು ಭಾಗವಹಿಸಿದರು. ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.