ಮುರೂರು: ಸತ್ಯನಾರಾಯಣ ಶರ್ಮ ಅವರ ತೋಟಕ್ಕೆ ಕಾಡಾನೆ ದಾಳಿ – ಕೃಷಿ ನಾಶ

0

ಮಂಡೆಕೋಲು ಗ್ರಾಮದ ಮುರೂರು ಪರಿಸರದಲ್ಲಿ ಕಾಡಾನೆಗಳು ಕೃಷಿಕರ ತೋಟಗಳಿಗೆ ನಿರಂತರವಾಗಿ ದಾಳಿ ನಡೆಸಿ ಕೃಷಿ ನಾಶ ಮಾಡುತ್ತಿದ್ದು, ನ.17ರಂದು ಮುರೂರಿನ ಸತ್ಯನಾರಾಯಣ ಶರ್ಮ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿ, ಕೃಷಿ ವಸ್ತುಗಳನ್ನು ಹಾನಿಗೊಳಿಸಿದೆ.

ಅಡಿಕೆ, ಬಾಳೆ, ತೆಂಗಿನ ಕೃಷಿಗೆ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.