ಯೂನಿಯನ್ ಬ್ಯಾಂಕ್ ನಿಂದ ಅಂಬಟಡ್ಕದ ವೆಂಕಟರಮಣ ದೇವ ಮಂದಿರಕ್ಕೆ e- ಹುಂಡಿ ಹಸ್ತಾಂತರ

0

ಯೂನಿಯನ್ ಬ್ಯಾಂಕ್ ಸುಳ್ಯ ಶಾಖೆ ವತಿಯಿಂದ ಇತ್ತೀಚೆಗೆ ಸುಳ್ಯ ಅಂಬಟಡ್ಕದ ಶ್ರೀ ವೆಂಕಟರಮಣ ದೇವ ಮಂದಿರಕ್ಕೆ e- ಹುಂಡಿ ಹಸ್ತಾಂತರಿಸಲಾಯಿತು. ಯೂನಿಯನ್ ಬ್ಯಾಂಕ್ ಸುಳ್ಯ ಶಾಖಾ ಪ್ರಬಂಧಕರಾದ ಅಜಯ್ ಕುಮಾರ್ ದೇವಳಕ್ಕೆ e- ಹುಂಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಸತೀಶ್, ಗೋಪಾಲಕೃಷ್ಣ ಶೆಣೈ , ದೇವ ಮಂದಿರ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಶೆಣೈ, ಕಾರ್ಯದರ್ಶಿ ಜಿ ಜಿ ನಾಯಕ್, ಚೆನ್ನಕೇಶವ ಭಂಡಾರಿ,ಗಿರಿಧರ್ ಹೆಗ್ಡೆ, ಗೌತಮ್ ಭಟ್, ಅನೂಪ್ ಪೈ , ಅರ್ಚಕರಾದ ನರಸಿಂಹ ಭಟ್ , ಮೆನೇಜರ್ ರಮಾನಂದ ಭಟ್ , ರಾಜೇಶ್ ಮತ್ತಿತ್ತರ ಭಕ್ತಾದಿಗಳು ಉಪಸ್ಥಿತರಿದ್ದರು.