ಅರಂತೋಡು:ಕೊಡಂಕೇರಿ ಕೊರಗಜ್ಜ ದೈವಸ್ಥಾನದ ಜಾಲ ಕಾರಣಿಕ ಧ್ವನಿ ಸುರುಳಿ ಬಿಡುಗಡೆ

0

ಅರಂತೋಡಿನ ಕೋಡಂಕೇರಿ ಕೊರಗಜ್ಜನ ಸಾನಿಧ್ಯದಲ್ಲಿ ಕೋಡಂಕೇರಿದ ಜಾಲ ಕಾರ್ಣಿಕ ಎಂಬ ತುಳು ಭಕ್ತಿ ಗೀತೆಯನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ ಸಾನಿಧ್ಯದಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೋಡಂಕೇರಿ, ದೈವಸ್ಥಾನದ ಮೊಕ್ತೇಸರ ವಾರಿಜ ಕೋಡಂಕೇರಿ, ಗುರುವಪ್ಪ ಹಾಗೂ ದ್ವನಿ ಸುರುಳಿಯ ಗಾಯಕಿ ವರ್ಷಿತಾ ಸುಳ್ಯ ಹಾಗೂ ವಿನಯ್ ಕುಂಬ್ರ ಉಪಸ್ಥಿತರಿದ್ದರು.
ಧ್ವನಿ ಸುರುಳಿ ಬಿಡುಗಡೆಯ ಬಳಿಕ ಸಂಕ್ರಮಣದ ಅಗೆಲು ಸೇವೆ ನಡೆದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು.