ಕೊಡಗು ಮತ್ತು ದ.ಕ.ಗೌಡ ಸಮಾಜ ಬೆಂಗಳೂರು ಇದರ ನೂತನ ಆಡಳಿತ ಮಂಡಳಿ ಪುನರ್ ರಚನೆ

0


ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ.) ಬೆಂಗಳೂರು ಇದರ 2023 -25ನೇ ಸಾಲಿನ ನೂತನ ಆಡಳಿತ ಮಂಡಳಿಯ ಪುನರ್ ರಚನೆ ಯು ನ.19 ರಂದು ಬೆಂಗಳೂರಿನ ಲಗ್ಗೆರೆಯಲ್ಲಿರುವ ನಮ್ಮನೆ ಆಡಳಿತ ಮಂಡಳಿಯ ಸಭಾಂಗಣದಲ್ಲಿ ನಡೆದ ನಿರ್ದೇಶಕರುಗಳ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಸಮಾಜದ ನೂತನ ಅಧ್ಯಕ್ಷರಾಗಿ ಪಳಂಗಪ್ಪ ಪಾಣತ್ತಲೆ, ಉಪಾಧ್ಯಕ್ಷರಾಗಿ ನಾಗೇಶ್ ಕುಮಾರ್ ಕಲ್ಲುಮುಟ್ಲು, ಗೌರವ ಕಾರ್ಯದರ್ಶಿಗಳಾಗಿ ಸೋಮಣ್ಣ ಕುಂಭಗೌಡನ, ಖಜಾಂಜಿಯಾಗಿ ರಾಧಾಕೃಷ್ಣ ಗುತ್ತಿಗಾರುಮೂಲೆ, ಜಂಟಿ ಕಾರ್ಯದರ್ಶಿಗಳಾಗಿ ನಾಗೇಶ್ ಉಳುವಾರು ಬಂಟೋಡಿ ಮತ್ತು ನೇಹ ರೋಷನ್ ಪೊರೆಯನರವರು ಆಯ್ಕೆಯಾಗಿರುತ್ತಾರೆ.