ಕದಿಕಡ್ಕ : ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬ

0

ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ
ಮಕ್ಕಳ ದಿನಾಚರಣೆ
ಮತ್ತು ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ನ. 20 ರಂದು ನಡೆಯಿತು.

ಬಾಲವಿಕಾಸ ಸಮಿತಿಯ ಗೌರವ ಸಲಹೆಗಾರ ಅಬ್ದುಲ್ ಖಾದರ್ ಸಿ.ಎಚ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಸಮಾಜದ, ನಮ್ಮ, ನಿಮ್ಮೆಲ್ಲರ ಆಸ್ತಿ. ಇಲ್ಲಿ ಕಲಿಯುವ ಮಕ್ಕಳು ಸಮಾಜದ ಆಸ್ತಿಯಾಗಿ ಬೆಳೆಸುವ ಜವಾಬ್ದಾರಿ ನಮ್ಮದು. ನಮ್ಮ ಸಹಕಾರ ನೀಡೋಣ. ಸಾಮೂಹಿಕ ಹುಟ್ಟುಹಬ್ಬ ಮಗುವಿನ ಮನಸಿಗೆ ಒಳ್ಳೆಯ ಸಂದೇಶ ನೀಡುವ ಶುಭ ಕಾರ್ಯ ಎಂದರು.

ಅತಿಥಿಯಾಗಿ ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ, ಹಿರಿಯರಾದ
ಅಬ್ದುಲ್ಲ ಕದಿಕಡ್ಕ, ಪೋಷಕರಾದ ರಾಜೀವಿ ಕಾಳಮ್ಮನೆ ಉಪಸ್ಥಿತರಿದ್ದರು.

ಅಂಗನವಾಡಿ ಮಕ್ಕಳು ದೀಪ ಬೆಳಗಿಸಿದರು.

ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಪ್ರಾರ್ಥಿಸಿದರು.

ಬಾಲವಿಕಾಸ ಸಮಿತಿ ಸದಸ್ಯರಾದ ಶೇಖರ್ ಕಾಳಮನೆ ನಿರೂಪಿಸಿ ವಂದಿಸಿದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದಾನಿಗಳು ನೀಡಿದ ಸಿಹಿ ಮತ್ತು ಪಾನೀಯ ವಿತರಿಸಲಾಯಿತು.
ಜಾಲ್ಸೂರು ಬನಾರಿ ಎಲೆಕ್ಟ್ರಿಕಲ್ ಮಾಲಕ ನಂದಕಿಶೋರ್ ಬನಾರಿ ಮತ್ತು ದಿ. ವರುಣ್ ಕಾಳಮನೆ ಸ್ಮರಣಾರ್ಥ ಅಂಗನವಾಡಿಗೆ ನೀಡಿದ ಕೊಡುಗೆಗೆ ವಿಶೇಷ ವಂದನೆ ಸಲ್ಲಿಸಲಾಯಿತು.