ಸುಳ್ಯ ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನಕ್ಕಾಗಿ 2021_22 ಮತ್ತು 2022-23 ನೇ ಸಾಲಿನ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

ದಶಂಬರ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ಬಂಟರ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶದಿಂದ 2022-23ರ SSLC , PUC ಮತ್ತು ಅಂತಿಮ ಪದವಿಯಲ್ಲಿ ಪಾಸಾದ (ಅಂಕಗಳ ಪರಿಗಣನೆ ಇಲ್ಲ)ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಬಿಪಿಎಲ್ ಪಡಿತರ ಚೀಟಿಯ ಮತ್ತು ಮಾರ್ಕ್ ಕಾರ್ಡಿನ ಪ್ರತಿಯನ್ನು ಒಂದು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿಗೆ ತಮ್ಮ ಮಾಹಿತಿಯನ್ನು ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ 2021_22 ಮತ್ತು 2022_23ನೇ ಸಾಲಿನಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿಗಳ ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳ ಮತ್ತು ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಮಾಹಿತಿ ಯನ್ನು ನವಂಬರ ತಿಂಗಳ 30 ರ ಮೊದಲು ಆಯಾ ವಲಯದ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಗಳಲ್ಲಿ ಅಥವಾ ಸಂಘದ ಕಛೇರಿ ಕಾರ್ಯದರ್ಶಿಗಳಾದ ಶ್ರೀ ಕುಸುಮಾಧರ ರೈ ಬೂಡು ಇವರಲ್ಲಿ ನೀಡಬಹುದೆಂದು ಈ ಮೂಲಕ ವಿನಂತಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ ರೈ ಪತ್ರಿಕೆ ಹೇಳಿಕೆಯಲ್ಲಿ ನೀಡಿರುತ್ತಾರೆ.