ವಿಶ್ವನಾಥ ನಡುತೋಟರಿಗೆ ಸೀನಿಯರ್ ಚೇಂಬರ್ ವತಿಯಿಂದ ರಾಷ್ಟ್ರೀಯ ಪುರಸ್ಕಾರ

0

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ವಿಶ್ವನಾಥ ನಡುತೋಟ ಅವರಿಗೆ ರಾಷ್ಟ್ರೀಯ ಸ್ಥಾಪಕರ ಪುರಸ್ಕಾರ ಪಿಪಿಎಫ್ ನೀಡಿ ಗೌರವಿಸಲಾಗಿದೆ. ನ.19 ರಂದು ಶಿವಮೊಗ್ಗದಲ್ಲಿ ನಡೆದ ಪ್ರಾಂತೀಯ ಸಮ್ಮೇಳನದಲ್ಲಿ ರಾಷ್ಟ್ರ ಅಧ್ಯಕ್ಷ ಪ್ರೊಫೆಸರ್ ವರ್ಗಿಸ್ ವೈದ್ಯಾನ್ ಅವರು ಪುರಸ್ಕಾರ ನೀಡಿ ಗೌರವಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ನಲ್ಲಿ ಕೈಗೊಂಡ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ,ಸಾರ್ವಜನಿಕ ಸಂಪರ್ಕ ,ವ್ಯಕ್ತಿತ್ವ ವಿಕಸನ ,ಸಾಮಾಜಿಕ ಚಟುವಟಿಕೆ ಹಾಗೂ ಸಾರ್ವಜನಿಕರಿಗಾಗಿ ಕೈಗೊಂಡ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಹರಿಪ್ರಸಾದ್ ರೈ ,ಪೂರ್ವ ರಾಷ್ಟ್ರ ಅಧ್ಯಕ್ಷ ಡಾl ಕೇದಿಗೆ ಅರವಿಂದ ರಾವ್, ನಿಕಟ ಪೂರ್ವ ರಾಷ್ಟ್ರ ಅಧ್ಯಕ್ಷ ಭರತ್ ದಾಸ್ ,ಹಾಗೂ ರಾಷ್ಟ್ರೀಯ ಪದಾಧಿಕಾರಿಗಳು ಉಪಸ್ಥಿತರಿದ್ದರು.