ಸವಣೂರು : ಬೈಕ್ – ಸ್ಕೂಟಿ ಡಿಕ್ಕಿ – ಸವಾರರಿಗೆ ಗಾಯ, ಪ್ರಕರಣ ದಾಖಲು

0

ಸವಣೂರು ಸಮೀಪದ ಮಾಂತೂರು ಎಂಬಲ್ಲಿ ಬೈಕ್ ಸ್ಕೂಟಿ ಡಿಕ್ಕಿ ಹೊಡೆದುಕೊಂಡು ಸ್ಕೂಟಿ ಸವಾರರು ಗಾಯಗೊಂಡ ಘಟನೆ ನ.21 ರಂದು ರಾತ್ರಿ ನಡೆದಿದೆ.
ಅಬ್ದುಲ್ ನಜೀರ್ ಮತ್ತು ಹಿಂಬದಿ ಸವರರಾದ ಮಹಮ್ಮದ್ ಮೊಹಾಜ್ ಎಂಬವರು ಮಂಜೇಶ್ವರ ಸುಬ್ರಹ್ಮಣ್ಯ ರಸ್ತೆಯಲ್ಲಿ ಸವಣೂರು ಕಡೆಯಿಂದ ಮಾಂತೂರು ಕಡೆಗೆ ಬರುವಾಗ ಹಿಂಬದಿಯಿಂದ ಮಾಂತೂರು ಕಡೆಗೆ ಬರುವ ಕಿರಣ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಸ್ಕೂಟಿಗೆ ಡಿಕ್ಕಿ ಹೊಡೆಯಿತು.
ಪರಿಣಾಮ ಸ್ಕೂಟಿ ಸವಾರರು ರಸ್ತೆಗೆ ಬಿದ್ದು ಗಾಯವಾಗಿದ್ದು ಗಾಯಾಳುಗಳು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಸ್ಕೂಡಿ ಸವಾರರು ಬೆಳ್ಳಾರೆ ಪೊಲೀಸ್ ದೂರು ನೀಡಿದ್ದು ಬೈಕ್ ಸವಾರ ಕಿರಣ್ ವಿರುದ್ದ ಪ್ರಕರಣ ದಾಖಲಾಗಿದೆ.