ಶ್ರೀಮತಿ ವಿಮಲ ಚಿನ್ನಪ್ಪ ಗೌಡ ಕುರುಂಜಿಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಎಲ್ಲರನ್ನು ಜೊತೆಯಲ್ಲಿ ಸಾಮರಸ್ಯದಿಂದ ಮುನ್ನಡೆಸಿದವರು

ಸುಳ್ಯ ಕುರುಂಜಿ ದಿ.ಚಿನ್ನಪ್ಪ ಗೌಡರವರ ಧರ್ಮಪತ್ನಿ ಶ್ರೀಮತಿ ವಿಮಲ ಕುರುಂಜಿಯವರು ನ.13 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ನ.23 ರಂದು ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಕೆ.ಆರ್.ಗಂಗಾಧರ್ ರವರು ದಿ.ವಿಮಲ ಕುರುಂಜಿಯವರ ಬಗ್ಗೆ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಇವರು ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದರು.ಮಕ್ಕಳ ಯಶಸ್ವಿ ಜೀವನಕ್ಕೆ ತಳಹದಿ ಹಾಕಿಕೊಟ್ಟು ಅವರ ಎಲ್ಲಾ ಸಾಧನೆಗೆ ಪ್ರೇರಕ ಶಕ್ತಿಯಾಗಿ ನಿಂತವರು ,ಕಠಿಣ ಪರಿಶ್ರಮಿಯಾಗಿ ಉತ್ತಮ ಕೃಷಿಕರಾಗಿದ್ದು ಕುಟುಂಬದಲ್ಲಿ ಸಂಸ್ಕಾರವನ್ನು ರೂಪಿಸಿದವರಾಗಿದ್ದರು.


ಇವರು ಎಲ್ಲರನ್ನು ಜೊತೆಯಲ್ಲಿ ಸಾಮರಸ್ಯದಿಂದ ಮುನ್ನಡೆಸಿದವರು ಎಂದು ಹೇಳಿ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಭಾಸ್ಕರ ಕುರುಂಜಿಯವರು ದೀಪ ಬೆಳಗಿಸಿದರು.


ಪುತ್ರ ಕೆ.ಸಿ.ಸದಾನಂದರವರು ಸ್ವಾಗತಿಸಿದರು.
ಆಗಮಿಸಿದ ನೂರಾರು ಜನರು ದಿ.ವಿಮಲ ಕುರುಂಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪುತ್ರರಾದ
ಪುತ್ರರಾದ ಸೂರ್ಯಾನಂದ ಕೆ.ಸಿ, ಉದ್ಯಮಿಗಳಾದ ನಂದಾ ಇಲೆಕ್ಟ್ರಾನಿಕ್ಸ್ ಮಾಲಕ ಸತ್ಯಾನಂದ ಕೆ.ಸಿ,ನಂದಾ ಸ್ಟೋರ್ ಮಾಲಕ ಶಿವಾನಂದ ಕೆ.ಸಿ ಪುತ್ರಿಯರಾದ ಶ್ರೀಮತಿ ಹೇಮಾವತಿ ನಾಣಯ್ಯ ಉಳುವಾರು ಕುಶಾಲನಗರ,ಶ್ರೀಮತಿ ಸೋಮಾವತಿ ರಾಮಕೃಷ್ಣ ಮಾವಂಜಿ ಮಂಡೆಕೋಲು, ಶ್ರೀಮತಿ ಹಾರಾವತಿ ಶಿವಪ್ಪ ಗೌಡ ಕುಡೆಕಲ್ಲು ಮಾಂಬುಳಿ, ಶ್ರೀಮತಿ ಜಯಂತಿ ಸುಲೋಚನ ಗೌಡ ದೊಡ್ಡಿಹಿತ್ಲು , ಸೊಸೆಯಂದಿರು, ಅಳಿಯಂದಿರು,ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.