ನಡುಗಲ್ಲು ಶಾಲೆಯಲ್ಲಿ ಕ್ರೀಡಾಕೂಟ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು , ಹಿರಿಯ ವಿದ್ಯಾರ್ಥಿ ಸಂಘ, ಊರ ವಿದ್ಯಾ ಅಭಿಮಾನಿಗಳ ಸಹಭಾಗಿತ್ವದಲ್ಲಿ ನ.19 ರಂದು ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಆರಂಭದಲ್ಲಿ ಶಾಲಾ ಧ್ವಜಾರೋಹಣವನ್ನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಮಾವಿನಕಟ್ಟೆ ನಡೆಸಿಕೊಟ್ಟರು. ಕೆ ರಾಮಚಂದ್ರ ಭಟ್ ಶಿವ ಸದನ ನಡುಗಲ್ಲು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಉಮೇಶ್ವರಿ ನೆ ಲ್ಲಿಪುಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯ, ಇದರ ಆಂಗ್ಲ ಭಾಷಾ ಉಪನ್ಯಾಸಕರಾದ ಸುಬ್ರಹ್ಮಣ್ಯ ಅತ್ಯಾಡಿ, ಶಾಲಾ ಶಿಕ್ಷಣ ಸಂಯೋಜಕರಾದ ಶ್ರೀಮತಿ ನಳಿನಿ ವೇದಿಕೆಯಲ್ಲಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಶ್ರೀಮತಿ ಪ್ರಮೀಳಾ ಯರ್ದಡ್ಕ, ಶ್ರೀಮತಿ ಲೀಲಾವತಿ ಅಂಜೇರಿ , ಶಾಲಾ ನಾಯಕ ಮಾಸ್ಟರ್ ಕೌಶಿಕ್ ಎನ್. ಕೆ. ಉಪಸ್ಥಿತರಿದ್ದ ರು ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ, ಕಬ್ಬಡ್ಡಿ, ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಕ್ರಿಕೆಟ್. ಮಹಿಳೆಯರಿಗೆ ಲಗೋರಿ, ಡಾ ಜ್‌ಬಾಲ್, ನಿಂಬೆ ಚಮಚ, ಲಕ್ಕಿ ಗೇಮ್,ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಸ್ಪರ್ಧೆಯಲ್ಲಿ ಹಿರಿಯರು ಕಿರಿಯರೆ ಲ್ಲ ರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ಪರ್ಧಾ ನಿರ್ಣಾಯಕರಾಗಿ ಶಿವಕುಮಾರ್ ಮರಕತ, ಕಿಶೋರ್ ಅಂಬೆ ಕಲ್ಲು ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮುಖ್ಯ ಗುರುಗಳಾದ ಚಂದ್ರಶೇಖರ ಪಾರೆಪ್ಪಾ ಡಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಕುಮಾರಿ ಸುಧಾರಾಣಿ ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ವನಜಾಕ್ಷಿ ನಿರ್ವಹಿಸಿದರು.