ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ

0

ಕೇರ್ಪಡ ಶ್ರೀಮಹಿಷಮರ್ಧಿನಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಡಿ.15 ಮತ್ತು 16ರಂದು ವರ್ಷಾವಧಿ ಜಾತ್ರೋತ್ಸವ ನಡೆಯಲಿರುವುದು.
ಆ ಪ್ರಯುಕ್ತ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ರವರ ಅಧ್ಯಕ್ಷತೆ. ನ. 24ರಂದು ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಮತ್ತು ನವರಾತ್ರಿ ಸಮಯದಲ್ಲಿ 10 ದಿವಸಗಳ ಸೇವಾಧಿ ಧಾರ್ಮಿಕ ಕಾರ್ಯಕ್ರಮ ಮತ್ತು ವೈದಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಮಂಡನೆ ನಡೆಯಿತು.

ಕಾರ್ಯದರ್ಶಿ ವೆಂಕಪ್ಪಗೌಡ ಆಲಾಜೆ ವರದಿ ವಾಚಿಸಿದರು. ಅಧ್ಯಕ್ಷರು ಸ್ವಾಗತಿಸಿ ವಂದಿಸಿದರು . ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ರೂಪರಾಜ . ರೈ.ಕೆ., ಶ್ರೀಹರಿ ಕುಂಜೂರಾಯ, ನಾಗೇಶ್ ಆಳ್ವ, ಭಾಗ್ಯ ಪ್ರಸನ್ನ .ಕೆ., ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಸದಸ್ಯರಾದ ಕೇಶವ .ಕೆ. , ಗಿರೀಶ್ . ಕೆ., ಪ್ರದೀಪ್ .ರೈ. ಎಣ್ಮೂರು, ಬಾಲಕೃಷ್ಣ‌ ಕೊಠಾರ, ಗಂಗಾಧರ ಪಂಡಿತ್, ಸುಂದರ ಗೌಡ ಆರೆಂಬಿ, ರಾಮಚಂದ್ರ ಪೂಜಾರಿ, ಕೇಶವ ಗೌಡ . ಕೆ., ವಿಶ್ವನಾಥ ರೈ ಕುಳೈತ್ತೋಡಿ, ಲೋಲಾಕ್ಷಿ .ಕೆ., ಶೀಲಾವತಿ . ಎಸ್ , ಶಶಿಕಲಾ .ಕೆ., ಗೀತಾ. ಕೆ , ಸೀತಾಲಕ್ಷ್ಮಿ . ಕೆ , ಜಾನಕಿ.ಎ., ಯಶೋಧ ಸುಂದರ, ಹೊನ್ನಮ್ಮ .ಕೆ., ಇನ್ನಿತರರು ಉಪಸ್ಥಿತರಿದ್ದರು.