ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿ ರಚನೆ; ಅಧ್ಯಕ್ಷರಾಗಿ ರಮಾನಂದ ಎಣ್ಣೆಮಜಲು

0

ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ 9ನೇ ವರ್ಷದ ನೇಮೋತ್ಸವದ ಪೂರ್ವಭಾವಿ ಸಭೆ ನಡೆದು ಸಮಿತಿ ರಚನೆಯಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ರಮಾನಂದ ಎಣ್ಣೆಮಜಲು, ಉಪಾಧ್ಯಕ್ಷರಾಗಿ ಚಂದ್ರಶೇಖರ ಗೌಡ ಪಂಡಿ ಮತ್ತು ಕೊರಗಪ್ಪ ಕೊನ್ನಡ್ಕ, ಕಾರ್ಯದರ್ಶಿಯಾಗಿ ಸುನೀತ್ ಪಟೋಳಿ, ಜತೆ ಕಾರ್ಯದರ್ಶಿಯಾಗಿ ಅಭಿಲಾಷ್ ಕೊನ್ನಡ್ಕ, ರಾಜೇಶ್ ಎಣ್ಣೆಮಜಲು ಖಜಾಂಜಿಯಾಗಿ ಚಂದ್ರನಾಥ ಪಟೋಳಿ, ಸಂಘಟನಾ ಕಾರ್ಯದರ್ಶಿಯಾಗಿ ಮುರಳೀಧರ ಎಣ್ಣೆಮಜಲು, ಹಿಮಕರ ಎಣ್ಣೆಮಜಲು, ಸುಪ್ರೀತ್ ಕೊನ್ನಡ್ಕ, ಚೇತನ್ ಕೊನ್ನಡ್ಕರನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಪ್ರಕಾಶ್ ಮೂಡ್ನೂರು, ಗೌರವ ಸಲಹೆಗಾರರಾಗಿ ಭಾಸ್ಕರ ಗೌಡ ಪಂಡಿ, ಚನಿಯ ಪಟೋಳಿ, ಶೂರಪ್ಪ ಗೌಡ ಪಂಡಿ ಮತ್ತು ಸದಸ್ಯರಾಗಿ ನೇಮಿಚಂದ್ರ ಪಟೋಳಿ, ಪೊಡಿಯ ಕೊನ್ನಡ್ಕ, ಬಾಲಕೃಷ್ಣ ಕೊನ್ನಡ್ಕ, ಯೋಗೀಶ್ ಕೊನ್ನಡ್ಕ, ವಿಜಯ ಕೊನ್ನಡ್ಕ, ಅವಿನಾಶ ಕೊನ್ನಡ್ಕ, ಕೃತಿಕ್ ಕೊನ್ನಡ್ಕ, ಪುಟ್ಟಣ್ಣ ಪಟೋಳಿ, ಮತ್ತು ನೇಮೋತ್ಸವದ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಯಮುನಾ ಕೊರಗಪ್ಪ ಕೊನ್ನಡ್ಕ, ಕಾರ್ಯದರ್ಶಿಯಾಗಿ ಸುಮಿತ್ರ ಕೊನ್ನಡ್ಕ, ಭಾಗೀರಥಿ ಕೊನ್ನಡ್ಕ ಗೌರವ ಅಧ್ಯಕ್ಷರಾಗಿ ಪಿಲೆತ್ತಿ ಕೊನ್ನಡ್ಕ, ಗೌರವ ಸಲಹೆಗಾರರಾಗಿ ಬೊಳ್ಳೆಚ್ಚಿ ಕೊನ್ನಡ್ಕ, ಕಮಲ ಕೊನ್ನಡ್ಕ, ಐತ್ತೆ ಕೊನ್ನಡ್ಕ ಹಾಗೂ ಸದಸ್ಯರಾಗಿ ಸುವರ್ಣ ಕೊನ್ನಡ್ಕರನ್ನು ಆರಿಸಲಾಯಿತು.

ಸಭೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಮೋನಪ್ಪ ಕೊನ್ನಡ್ಕ, ಪ್ರಧಾನ ಕಾರ್ಯದರ್ಶಿ ಕಿರಣ್ ಕೊನ್ನಡ್ಕ ದೈವಪಾತ್ರಿಗಳಾದ ಮೋಹನ ಕೊನ್ನಡ್ಕ, ರಾಮ ಕೊನ್ನಡ್ಕ, ಶೀನ ಕೊನ್ನಡ್ಕ, ಅರುಣ್ ಪಟೋಳಿ, ಸುಂದರ ಕೊನ್ನಡ್ಕ, ಐತ್ತಪ್ಪ ಕೊನ್ನಡ್ಕ, ಚೋಮ ಕೊನ್ನಡ್ಕ ಉಪಸ್ಥಿತರಿದ್ದರು. ಕಿರಣ್ ಕೊನ್ನಡ್ಕ ಸ್ವಾಗತಿಸಿ ವಂದಿಸಿದರು.