ಬೆಳ್ಳಾರೆಯ ಉಜ್ರೋಳಿಯಲ್ಲಿ ಭಕ್ತಿ,ಸಂಭ್ರಮದಿಂದ ನಡೆದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

0

ಬೆಳ್ಳಾರೆಯ ಉಜ್ರೋಳಿಯಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀ ಅಯ್ಯಪ್ಪ ಸ್ವಾಮಿಯ 9 ನೇ ವರ್ಷದ ದೀಪೋತ್ಸವವು ಡಿ.23 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.


ಬೆಳಿಗ್ಗೆ ಸ್ಥಳ ಶುದ್ಧೀಕರಣ ಮತ್ತು ಗಣಹೋಮ ಸಂಜೆ ಪಾಲ್ ಕೊಂಬು ಮೆರವಣಿಗೆ ವಿವಿಧ ಚೆಂಡೆ ,ವಾದ್ಯ ,ಕುಣಿತ ಭಜನೆಯೊಂದಿಗೆ ಗೌರಿಹೊಳೆಯಿಂದ ಉಜ್ರೋಳಿವರೆಗೆ ನಡೆಯಿತು.


ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಕುಣಿತ ಭಜನೆ ನಡೆಯಿತು.

ರಾತ್ರಿ ಅಗ್ನಿಸ್ಪರ್ಶಿ ನಂತರ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರವ ಅನ್ನಸಂತರ್ಪಣೆ,ಬಳಿಕ ಭಕ್ತಿ ರಸಮಂಜರಿ ನಡೆಯಿತು. ಅಪ್ಪ ಸೇವೆ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ತುಳು ಯಕ್ಷಗಾನ ಬಯಲಾಟ “ಕಾರಿಂಜ ಕಾಂಜವೆ “ನಡೆಯಿತು. ಡಿ.24 ರಂದು ಪ್ರಾತ:ಕಾಲ ಕೆಂಡ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ಮತ್ತು ಸರ್ವಸದಸ್ಯರು, ಗಂಗಾಧರ ಗುರುಸ್ವಾಮಿ ಮತ್ತು ಶಿಷ್ಯವೃಂದ ಉಜ್ರೋಳಿ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.