ಕೇರ್ಪಡ ಮಹಿಷಮರ್ಧಿನಿ ದೇವಸ್ಥಾನದ ತೀರ್ಥಬಾವಿ ಕಲ್ಯಾಣಿಕೆರೆ ಜೀರ್ಣೋದ್ಧಾರಕ್ಕೆ ದೇಣಿಗೆ ಹಸ್ತಾಂತರ

0


ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಇತಿಹಾಸ ಚರಿತ್ರೆಯುಳ್ಳ ತೀರ್ಥಬಾವಿ ಕಲ್ಯಾಣಿಕೆರೆ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇಂದು ನಿಂತಿಕಲ್ಲು ಪರಿಸರದ ಭಕ್ತಾದಿಗಳ ತಂಡದ ಉಮೇಶ್ ರೈ ಮರುವಂಜ ರೂ. 25೦೦೦ ದೇಣಿಗೆ ಹಸ್ತಾಂತರಿಸಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ದೇಣಿಗೆಯನ್ನು ಸ್ವೀಕರಿಸಿದರು. ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ವೈದಿಕ ಕಾರ್ಯಕ್ರಮ ನಡೆಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ನಾಗೇಶ್ ಆಳ್ವ ಕಟ್ಟಬೀಡು, ಸಿಬ್ಬಂದಿ ರಾಮಚಂದ್ರ ಪೂಜಾರಿ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.