ಶಾಂತಿನಗರ ಸ.ಉ.ಹಿ.ಪ್ರಾ ಶಾಲೆಯ ವಾರ್ಷಿಕೋತ್ಸವ- ಕ್ರೀಡೋಪಕರಣಗಳ ಕೊಡುಗೆ

0

ಶಾಂತಿನಗರ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯವಾರ್ಷಿಕೋತ್ಸವವು ಡಿ.30 ರಂದು ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ನಜೀರ್ ಧ್ವಜಾರೋಹಣ ನೆರವೇರಿಸಿದರು.
ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಎಸ್. ಡಿ. ಎಂ. ಸಿ ಅಧ್ಯಕ್ಷ ಮಹಮ್ಮದ್ ನಜೀರ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಪ್ರಸೂತಿ ತಜ್ಞ ವೈದ್ಯರಾದ ಶ್ರೀಮತಿ ವೀಣಾ ಪಾಲಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸದಸ್ಯ ಅಬೂಬಕರ್ ಶಾಂತಿನಗರ, ಗೋಪಾಲಕೃಷ್ಣ ಭಟ್ ಶಾಂತಿನಗರ,
ಪಳ್ಳಿಕುಂಞೆ ಶಾಂತಿನಗರ, ಮಹಮ್ಮದ್ ತಾಹ ಶಾಂತಿನಗರ, ಗೌರವ ಶಿಕ್ಷಕ ಕುಶಾಲಪ್ಪ ಶಾಂತಿನಗರ, ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ದಾಮೋದರ ಮಂಚಿ, ದೀಪಾಂಜಲಿ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷೆ
ಶ್ರೀಮತಿ ಹರ್ಷಕರುಣಾಕರ ಸೇರ್ಕಜೆ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ಕೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಸರ್ಕಲ್ ಶಾಂತಿನಗರ ಇವರ ವತಿಯಿಂದ ಶಾಲೆಗೆ ರೂ. 15 ಸಾವಿರ ಮೌಲ್ಯದಕ್ರೀಡೋಪಕರಣವನ್ನು ಕೊಡುಗೆಯಾಗಿ ನೀಡಿದರು.
ಸಭೆಯ ನಂತರ ಶಾಲಾ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್. ಡಿ. ಎಮ್. ಸಿ.ಸದಸ್ಯರು, ಶಿಕ್ಷಕರು, ಪೋಷಕರು ಸಹಕರಿಸಿದರು.