ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ವಾರ್ಷಿಕ ಮಹಾಸಭೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ- ಕಮಲಾಕ್ಷ ಕೆ, ಕಾರ್ಯದರ್ಶಿ-ಸನತ್ ಸಿ,ಖಜಾಂಜಿ- ವಿನೋದ್ ರಾಜ್ .ಬಿ

ಆಲೆಟ್ಟಿ ಗ್ರಾಮದ ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ವಾರ್ಷಿಕ
ಮಹಾಸಭೆಯು ಬಡ್ಡಡ್ಕ ರಾಮಕೃಷ್ಣ.ಅ.ಹಿ.
ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಡಿ.31 ರಂದು ಸಂಘದ ಅಧ್ಯಕ್ಷ ವೆಂಕಟ್ರಮಣದೋಣಿಮೂಲೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ 2022-23 ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು.
2023 – 25 ನೇ ಸಾಲಿನ ನೂತನಪದಾಧಿಕಾರಿಗಳ
ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷ ಡಾ| ಜಯದೀಪ್ ಎನ್. ಎ ಬಡ್ಡಡ್ಕ ,ಅಧ್ಯಕ್ಷ ಕಮಲಾಕ್ಷ ಬಡ್ಡಡ್ಕ, ಉಪಾಧ್ಯಕ್ಷ ಜಯರಾಮ ಗುಂಡ್ಯ, ಶಂಕರ ಆಡಿಂಜ ,
ಕಾರ್ಯದರ್ಶಿ ಸನತ್ ಚಳ್ಳಂಗಾರು,
ಜತೆ ಕಾರ್ಯದರ್ಶಿ ಕಿರಣ್ ಬಡ್ಡಡ್ಕ ,ಖಜಾಂಜಿ ವಿನೋದ್ ರಾಜ್ ಬಡ್ಡಡ್ಕ,
ಕ್ರೀಡಾ ಕಾರ್ಯದರ್ಶಿ ಅಭಿಜಿತ್ ತಿಮ್ಮನಮೂಲೆ,
ಜತೆ ಕ್ರೀಡಾ ಕಾರ್ಯದರ್ಶಿ ಶ್ರವಣ್ ಬಡ್ಡಡ್ಕ, ಸಾಂಸ್ಕೃತಿಕ ಕಾರ್ಯದರ್ಶಿ ಜಯಕುಮಾರ ಆಡಿಂಜ,
ಜತೆ ಸಾಂಸ್ಕೃತಿಕ ಕಾರ್ಯದರ್ಶಿ ಸಂದೀಪ್ ಬಡ್ಡಡ್ಕ, ಸಂಘಟನಾ ಕಾರ್ಯದರ್ಶಿ ಭುವನೇಶ್ವರ ಬಡ್ಡಡ್ಕ,
ಛಾಯಾಗ್ರಾಹಕ ನವೀನ್ ಪಾವಲಿಕಜೆ,ಪತ್ರಿಕಾ ಪ್ರತಿನಿಧಿ ವೈಕುಂಠ ದೋಣಿಮೂಲೆ ಯವರ ನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಬಿ. ದಿನೇಶ್ ಬಡ್ಡಡ್ಕ, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ಜೀರ್ಣೋದ್ದಾರ ಸಮಿತಿ ಯ ಅಧ್ಯಕ್ಷ ಬಾಲಚಂದ್ರ ಪೆರುಮುಂಡ, ಜನಾರ್ದನ ಗುರುಸ್ವಾಮಿ ಗುಂಡ್ಯ ಕಳ್ಳಪಲ್ಲಿ, ಸಂಘದ ಗೌರವ ಸಲಹೆ ಗಾರ ರಾದ ಪ್ರಕಾಶ್ ಕೆ .ವಿ, ವೆಂಕಟ್ರಾಜ್ ಬಿ. ಆರ್,
ದೇವಿಪ್ರಸಾದ್ ಬಡ್ಡಡ್ಕ,
ಗಂಗಾಧರ ಬಡ್ಡಡ್ಕ, ಶಾಂತರಾಮ ಭಟ್ ಶಾಂತ ಮಂಗಲ, ಅಮರ
ಸ್ವ ಸಹಾಯ ಸಂಘದ ಅಧ್ಯಕ್ಷ ಶಶಿಧರ ತಿಮ್ಮನಮೂಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಹರೀಶ್ ಕೆ.ಜೆ, ಗಿರಿಯಪ್ಪ ನಾಯ್ಕ್ ,ಕಮಲಾಕ್ಷ ರವರನ್ನು ಗೌರವಿಸಲಾಯಿತು.